ಸುರತ್ಕಲ್: ಟೀಮ್ ಕಾಲ ಭೈರವ ಕಾನ ಇದರ 6ನೇ ವರ್ಷದ ಚೌತಿ ಪಿಲಿ
ಆಶ್ರಯ ಕಾಲನಿ ಕಟ್ಲ ಇದರ ಗಣೇಶೋತ್ಸವದ ಶೋಭಾಯಾತ್ರೆಗೆ ಹುಲಿವೇಷದ ಟ್ಯಾಬ್ಲೋ

ಸುರತ್ಕಲ್:  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯಕಾಲನಿ ಕಟ್ಲ ಇದರ ಆಶ್ರಯದಲ್ಲಿ ದಿನಾಂಕ: 19-09-2023ರಂದು ನಡೆಯುವ 12ನೇ ವರ್ಷದ ಗಣೇಶೋತ್ಸವದ ಶೋಭಾಯಾತ್ರೆಗೆ ಟೀಮ್ ಕಾಲ ಭೈರವ ಕಾನ ಇವರಿಂದ ಹುಲಿವೇಷದ ಟ್ಯಾಬ್ಲೋ ನಡೆಯಲಿದೆ.

ಸತತ ಐದು ವರ್ಷಗಳಿಂದ ಹುಲಿವೇಷದ ಟ್ಯಾಬ್ಲೋ ನಡೆಸಿಕೊಂಡು ಬಂದಿರುವ ಟೀಮ್ ಕಲಾ ಭೈರವ ಕಾನ ತಂಡ ವರ್ಷ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ತಂಡಕ್ಕೆ ಸಹಕರಿಸಿದ ಸರ್ವರಿಗೂ ಟೀಮ್ ಕಾಲ ಬೈರವ ತಂಡ ಧನ್ಯವಾದ ತಿಳಿಸಿದೆ. 

18-09-2023ರಂದು ರಾತ್ರಿ 07-30ಗೆ ಕಟ್ಲ ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ಊದು ಹಾಕುವ ಕಾರ್ಯಕ್ರಮ ನಡೆಯಲಿದೆ.  


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!