ಉಪ್ಪಿನಂಗಡಿ: ಮರದ ದಿಮ್ಮಿಗಳ ಸಾಗಾಟ ಮಾಡುತ್ತಿದ್ದ ಅಬ್ಬಾಸ್ ಅರೆಸ್ಟ್.!
ಮರದ ದಿಮ್ಮಿ ಅಕ್ರಮ ಸಾಗಾಟ; ಲಾರಿ ವಶ-ಆರೋಪಿ ಸೆರೆ

ಉಪ್ಪಿನಂಗಡಿ: ನೆಲ್ಯಾಡಿಯ ಹೊಸಮಜಲು ಎನ್ನುವಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮರದ ದಿಮ್ಮಿಗಳನ್ನು ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಆರೋಪಿಯನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿ ಸಕಲೇಶಪುರದ ಆನಂಗಿ ಮನೆ ನಿವಾಸಿ ರಜಾಕ್‌ ಬಿನ್‌ ಅಬ್ಬಾಸ್‌ನನ್ನು ದಸ್ತಗಿರಿ ಮಾಡಿ ಆತ ಲಾರಿಯಲ್ಲಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್‌ ಸಿ.ಕೆ., ರಾವುತ್ತಪ್ಪ ಬಿರಾದಾರ್‌, ರಾಜೇಶ್‌ ಮತ್ತು ದಿನೇಶ್‌ ಭಾಗವಹಿಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!