ಬೆಳ್ತಂಗಡಿ: ಇಲ್ಲೊಬ್ಬ ಚಾಣಾಕ್ಷ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ.!
14ನೇ ವಯಸ್ಸಿನಿಂದ ಶುರು-ನಾಲ್ಕು ರಾಜ್ಯದಲ್ಲಿ ವಾಟೆಂಡ್

ಖತರ್ನಾಕ್ ಖದೀಮ ಅರೆಸ್ಟ್

ಬೆಳ್ತಂಗಡಿ: ಇವನೂ ಅಂತಿಂಥಾ ಕಳ್ಳನಲ್ಲ, ಓದೋ ವಯಸ್ಸಿನಲ್ಲೇ ಖರ‍್ನಾಕ್ ಕೆಲಸಕ್ಕೆ ಹೆಚ್ಚೆಯಿಟ್ಟಿದ್ದ. ಹಗಲು ಹೊತ್ತಿನಲ್ಲೇ ಕಳ್ಳತನ ನಡೆಸುವ ಚಾಣಾಕ್ಷ ಕಳ್ಳ.  ಒಂದಲ್ಲ ಎರಡಲ್ಲಾ ನಾಲ್ಕು ರಾಜ್ಯದಲ್ಲಿ ವಾಟೆಂಡ್ ಆರೋಪಿ. ದ.ಕ ಜಿಲ್ಲೆ ಸಹಿತ ಹಲವೆಡೆ ಕಳ್ಳತನ ನಡೆಸಿದ್ದ ಈ ನಟೋರಿಯಸ್ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ನಟೋರಿಯಸ್ ಸ್ಟೋರಿ ಇಲ್ಲಿದೆ ನೋಡಿ.. 

ಈತನ ಹೆಸರು ಉಮೇಶ್ ಬಳೆಗಾರ ಮೂಲತಃ ಆಂಧ್ರಪ್ರದೇಶದವ ಸದ್ಯ ಕನ್ಯಾಕುಮಾರಿ ನಿವಾಸಿ. ದ.ಕ ಜಿಲ್ಲೆ ಸಹಿತ ಹಲವೆಡೆ ಕಳ್ಳತನ ನಡೆಸುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕಳೆದ ಆಗಸ್ಟ್ 12ರಂದು ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿದ ಆರೋಪಿ 15 ಪವನ್ ಚಿನ್ನಾಭರಣ ಮತ್ತು 20 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದನು. ಕೊನೆಗೂ ಈತನನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಉಮೇಶ್ ಬಳೆಗಾರನ ಮೊದಲ ಪತ್ನಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ಕೂಡ ಕಳ್ಳತನದಲ್ಲಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಈತನ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದೆ. ಅಲ್ಲದೆ ರ‍್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಹಗಲು ಹೊತ್ತಿನಲ್ಲಿಯೇ ಕಳ್ಳತನ ನಡೆಸುವ ಚಾಣಾಕ್ಷ ಕಳ್ಳ ಈತನಾಗಿದ್ದು ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿ ಉಮೇಶ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆರೋಪಿಯು 14 ನೇ ವಯಸ್ಸಿನಲ್ಲಿ ಅಂದರೆ 1994ರಿಂದ ಕಳ್ಳತನ ನಡೆಸುತ್ತಿದ್ದು, 9 ಭಾಷೆ ಮಾತನಾಡುತ್ತಾನೆ. ಆರೋಪಿಯು ಕಳ್ಳತನ ನಡೆಸಲು ಹೋಗುವಾಗ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ. ಬಳಿಕ ಸ್ಥಳೀಯ ವಸತಿ ಗೃಹದಲ್ಲಿ ರೂಮ್ ಬಾಡಿಗೆ ಪಡೆದು ಅಲ್ಲೇ ಉಳಿದುಕೊಳ್ಳುತ್ತಿದ್ದ. ಕಳ್ಳತನ ಮಾಡಿದ ಬಳಿಕ ಬೇರೆಡೆ ತೆರಳುತ್ತಿದ್ದ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ರ‍್ನಾಟಕ ರಾಜ್ಯದಲ್ಲಿ ಈಗಾಗಲೇ ಹಲವು ಕಳ್ಳತನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿ ಜೈಲು ಪಾಲಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಈ ವಿರುದ್ಧ ನಾಲ್ಕು ರಾಜ್ಯದ ನ್ಯಾಯಾಲಯಗಳಿಂದ ವಾರೆಂಟ್ ಜಾರಿಯಾಗಿತ್ತು. ನಾಲ್ಕು ರಾಜ್ಯದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. 

ಸದ್ಯ ಈ ನಟೋರಿಯಸ್ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಹಡೆಮುರಿ ಕಟ್ಟಿದ್ದಾನೆ.  ಕಾರ್ಯಾಚರಣೆಯಲ್ಲಿ  ಪಿಎ ಧನರಾಜ್ ಟಿ.ಎಮ್ ಹಾಗೂ ಚಂದ್ರ ಶೇಖರ್ ಎ.ಎಮ್, ಪಿಎ ಕೆ.ಜೆ. ತಿಲಕ್ , ಶಿವರಾಮ ನಾಯ್ಕ ಹೆಡ್‌ಕಾನ್ಸ್ಸ್ಟೇಬಲ್‌ಗಳಾದ ಬೆನ್ನಿಚ್ಚನ್, ಸುಂದರ ಶೆಟ್ಟಿ, ಪಳನಿವೇಲು, ಪ್ರಮೋದ್, ಇಬ್ರಾಹಿಂ, ಪೇದೆಗಳಾದ ಚರಣ್ ರಾಜ್, ಆನಂದ ಮುಂತಾದವರು ಪಾಲ್ಗೊಂಡಿದ್ದರು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!