ಮಂಗಳೂರು: ಡೆಂಗ್ಯೂವಿನಿಂದ ಬಳಲುತ್ತಿದ್ದ ಬಾಲಕ ಮೃತ್ಯು - ಅಂಗಾಂಗ ದಾನ
ಮಂಗಳೂರು: ಡೆಂಗ್ಯೂವಿನಿಂದ ಬಳಲುತ್ತಿದ್ದ ಬಾಲಕ ಮೃತ್ಯು - ಅಂಗಾಂಗ ದಾನ

 

ಮಂಗಳೂರು: ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ, ಹೃದಯಘಾತದಿಂದ ಮೃತಪಟ್ಟ ದುಃಖದ ಘಟನೆಯಲ್ಲೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಹೆತ್ತವರು ಅಂಗಾಂಗ  ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಲು ಮುಂದಾಗಿದ್ದಾರೆ.

ಮೃತ ಬಾಲಕನನ್ನು ಅತ್ತಾವರದ ಅಲ್ಫೋನ್ಸ್ ಡಿಸೋಜಾ ಹಾಗೂ ಸೋನಿಯಾ ಡಿಸೋಜಾ ದಂಪತಿಗಳ ಪುತ್ರ, 8 ನೇ ತರಗತಿಯಲ್ಲಿ ಅಭ್ಯಾಸುತ್ತಿದ್ದ ಆಶಿಶ್ ಡಿಸೋಜಾ(13) ಎಂದು ಗುರುತಿಸಲಾಗಿದೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆಶಿಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿರುವಂತೆಯೇ  ಹೃದಯ ಸ್ತಂಭನದಿ0ದ ಮೃತಪಟ್ಟಿದ್ದಾರೆ. ಸದಾ ಚುರುಕುತನದಿಂದ ಇದ್ದ ಆಶಿಶ್ ಇಗರ್ಜಿಯ ಬಲಿಪೀಠ ಸೇವಾ ಸಂಘದ ಸದಸ್ಯನಾಗಿದ್ದರು. ಪುತ್ರನನ್ನು ಅಗಲಿದ ನೋವಿನಲ್ಲಿ ಹೆತ್ತವರು  ಅಂಗಾಂಗ ಹಾಗೂ ದೇಹ ದಾನ ಮಾಡಿ ಹಲವರ ಬಾಳಿಗೆ ಬೆಳಕಾಗಲು ಮುಂದಾಗಿ ಸಾರ್ಥಕತೆ ಮರೆದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!