ಮಂಗಳೂರು: ಯಶಸ್ವಿಯಾಗಿ ನಡೆದ ಮಂಜಣ್ಣ ಸೇವಾ ಬ್ರಿಗೇಡ್ ಇದರ 5ನೇ ವರ್ಷದ "ಭಕ್ತಿ ಧರ್ಮದ ನಡೆ"
ಚಿಕಿತ್ಸೆಗಾಗಿ ಧನ ಸಹಾಯ - ಸಾಧಕರಿಗೆ ಸನ್ಮಾನ - ಗೋವುಗಳ ದತ್ತು ಸ್ವೀಕಾರ

ಮಂಗಳೂರು : ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ 5ನೇ ವರ್ಷದ ಭಕ್ತಿ ಧರ್ಮದ ನಡೆ ಪಾದಾಯಾತ್ರೆ ಯಶಸ್ವಿಯಾಗಿ ನಡೆದಿದೆ. ಮುಂಜಾನೆ ಚಿತ್ರಾಪುರ ಶ್ರೀ ದುರ್ಗಾಪಮೇಶ್ವರೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚಿತ್ರಾಪುರ ಮಠದ ಶ್ರೀಶ್ರೀಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರ ದಿವ್ಯಹಸ್ತದಿಂದ ಮತ್ತು ಗುರುಪುರ ವಜ್ರದೇಹಿ ಮಠದ ಸ್ವಾಮಿಗಳಾದ ಶ್ರೀಶ್ರೀಶ್ರೀ ರಾಜಶೇಖರಾನಂದ ಶ್ರೀಗಳ ಶುಭಾಶೀರ್ವಾದ ಜೊತೆಗೆ ಪಾದಯಾತ್ರೆಗೆ ಚಾಲನೆ ದೊರೆಯಿತು.

ಈ ಸಂಧರ್ಭ ಕಾಟಿಪಳ್ಳ ಕೊರಗಜ್ಜ ಕ್ಷೇತ್ರದ ಆರಾಧಕರಾದ ತಿಲಕ್ ರಾಜ್ ಕಾಟಿಪಳ್ಳ, ಕುಡುಂಬುರು ಗುತ್ತು ಪಿಲಿಚಾಮುಂಡಿ ದೈವಸ್ಥಾನದ ಗುತ್ತಿನಾರ್ ಜಯರಾಮ್ ಶೆಟ್ಟಿ ತೋಕೂರು, ತೋಕೂರು ಕೊರಗಜ್ಜ ಕ್ಷೇತ್ರದ ಆರಾಧಕರಾದ, ಮಾಧವ ಸುವರ್ಣ, ಬಿಜೆಪಿ ಶಾಸಕರಾದ ವೈ. ಭರತ್ ಶೆಟ್ಟಿ, ವಿ.ಹಿಂ.ಪ. ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ ವೆಲ್, ವಿ.ಹಿಂ.ಪ. ಜಿಲ್ಲಾಧ್ಯಕ್ಷರಾದ ಎಚ್. ಕೆ. ಪುರುಷೋತ್ತಮ್, ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಗೋವನಿತಾಷ್ರಯ ಟ್ರಸ್ಟ್ ಪಜೀರು ಇದರ ಪ್ರಧಾನ ಕಾರ್ಯದರ್ಶಿಯಾದ ಮನೋಹರ್ ಸುವರ್ಣ, ಬಜರಂಗದಳ ಪ್ರಮುಖರಾದ ಭುಜಂಗ ಕುಲಾಲ್ ಅದ್ಯಪಾಡಿ, ಮಂಗಳೂರು ಯಾಂತ್ರಿಕ ಮೀನುಗಾರಿಕಾ ಸಹಕಾರ ಸಂಘ (ನಿ) ಮಂಗಳೂರು ಇದರ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಮುದೆಯ ಸಂಚಾಲಕರಾದ ರಮೇಶ್ ರಾವ್, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಕಾರ್ತಿಕ್ ಭಟ್ ಬಿಜೆಪಿ ಜಿಲ್ಲಾ ಪ್ರಮುಖರಾದ, ಜಾಗರಣ ವೇದಿಕೆಯ ಸಂದೀಪ್ ಅಂಬ್ಲಮೊಗರು, ಬಿಜೆಪಿ ಜಿಲ್ಲಾ ಪ್ರಮುಖರಾದ ರಣದೀಪ್ ಕಾಂಚನ್, ಹಿಂದೂ ಯುವಸೇನೆ ಪ್ರಮುಖರಾದ ಪುರುಷೋತ್ತಮ್ ಜನತಾ ಕಾಲೋನಿ, ಮತ್ತು ಇತರ ಸಂಘ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು.

ಪರಮ ಪಾದದಿಂದ ಮೂಲ ಪಾದದೆಡೆಗೆ, ಸುಭಿಜ್ಞಾ ಸಮಾಜದ ಗುರಿಯೊಂದಿಗೆ ಭಕ್ತ ಜನರ ಪಾದಯಾತ್ರೆಯು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಸಹಸ್ರರು ಸಂಖ್ಯೆಯಲ್ಲಿ ಸೇರಿದ ಭಕ್ತರೊಂದಿಗೆ ಸಾಗಿತು.

ಲೋಕ ಕಲ್ಯಾಣಾರ್ಥವಾಗಿ ಈ ಬೃಹತ್ ಪಾದಯಾತ್ರೆಯು ಐದು ವರ್ಷಗಳಿಂದ ನಡೆಯುತ್ತಾ ಬಂದಿದೆ. ದಾರಿಯುದ್ದಕ್ಕೂ ಚೆಂಡೆ ನಾದ, ಭಜನಾ ತಂಡಗಳ ಕುಣಿತ ಭಜನೆ ಹಾಗೂ ಪುಟಾಣಿ ಮಕ್ಕಳು ರಾಮ, ಲಕ್ಷ್ಮಣ, ಸೀತೆ ಹನುಮಂತನ ವೇಷ ಧರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಇದರ ಜೊತೆಯಲ್ಲಿ ವಿವಿಧ ಸಂಘಟನೆ, ಸಂಘ ಸಂಸ್ಥೆಗಳ ವತಿಯಿಂದ ದಾರಿಯೂದ್ದಕ್ಕೂ ಅಲ್ಲಲ್ಲಿ ಪಾದಯಾತ್ರಿಗಳಿಗೆ ಹಣ್ಣು ಹಂಪಲು, ಪಾನೀಯಗಳ ವ್ಯವಸ್ಥೆಯನ್ನು ಮಾಡಿ ಈ ಪುಣ್ಯ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದರು.

ಮುಂಜಾನೆ ಆರಂಭಗೊಂಡ ಪಾದಯಾತ್ರೆಯಲ್ಲಿ ಸಹಸ್ರ ಮಂದಿ ಕಾಲ್ನಡಿಗೆಯ ಮೂಲಕ ದಿವ್ಯ ಸನ್ನಿಧಾನಕ್ಕೆ ತಲುಪಿದ ನಂತರ ಸಭಾಕಾರ್ಯಕ್ರಮ ನಡೆಯಿತು. ಪ್ರತಿ ವರ್ಷದಂತೆ ಈ ಬಾರಿಯೂ ಅಶಕ್ತ ಹಿಂದೂ ಕುಟುಂಬದ ಕಣ್ಣೀರೊರೆಸುವ ಕಾರ್ಯ ಗಣ್ಯರ ಸಮ್ಮುಖದಲ್ಲಿ ನಡೆಯಿತು. 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಫಾಲಿ ಇವರಿಗೆ ಸನ್ಮಾನ ಮಾಡಲಾಯಿತು. ಚಿಕಿತ್ಸಾ ವೆಚ್ಚಕ್ಕಾಗಿ ಕುಮಾರಿ ವೃಂದ ಹಾಗೂ ನಿತೀನ್ ಭಂಡಾರಿ ಇವರಿಗೆ ಧನ ಸಹಾಯ ಮತ್ತು ಈ ವರ್ಷ ಗೋ ವನಿತಾಶ್ರಮ ಟ್ರಸ್ಟ್ ಪಜೀರ್ ಇಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಎರಡು ಗೋವುಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ.

ಈ ಸಂದರ್ಭ ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿ ಕೇಮಾರು ಮಠ ಇವರು ಆಶೀರ್ವಚನ ನೀಡಿದರು, ಮತ್ತು ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಬಪ್ಪನಾಡು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೆಸರರಾದ ಮನೋಹರ್ ಶೆಟ್ಟಿ ಕಕ್ವಗುತ್ತು, ಬಿಜೆಪಿ ವಕ್ತಾರ ಜಗದೀಶ್ ಶೇಣವ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮೂಡಬಿದಿರೆ ವಿಧಾನ ಕ್ಷೇತ್ರದ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪೆರ್ಮುದೆ ಹಿಂದೂ ಅನುದಾನಿತ ಪ್ರಾಥಮಿಕ ಶಾಲೆಯ ಸ್ಥಾಪಕರು ರಮೇಶ್ ರಾವ್, ಬಿಜೆಪಿ ವಕ್ತಾರ ಈಶ್ವರ್ ಕಟೀಲ್, ಸುಕುಮಾರ್ ಶೆಟ್ಟಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಸ್ಥೆಯ ಸ್ಥಾಪಕ ಶಿವಕುಮಾರ್ ಕರ್ಜೆ, ಕರುಣಾಕರ್ ಶೆಟ್ಟಿ, ಎಸ್.ಎಸ್ ಫ್ರೆಂಡ್ಸ್ ಮುಲ್ಕಿ ಇದರ ಸ್ಥಾಪಕ ರಮನಾಥ್ ಪೈ, ಶಶಿಕಲಾ ಸುಕುಮಾರ್, ಜಯಾನಂದ ಅಂಚನ್ ಚೇಳಾರ್, ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗಿಶ್ ಕುಳಾಯಿ, ಜಯಪ್ರಕಾಶ್ ವಾಮಂಜೂರು, ಸುದೇಶ್ ಶೆಟ್ಟಿ ಪಡೀಲ್, ಕಾರ್ಕಳ ಜಾಗರಣ ವೇದಿಕೆ ಪ್ರಮುಖರಾದ ಸಂತೋಷ್ ಕಾರ್ಕಳ, ಮತ್ತು ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!