ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್‌ ಪ್ರತಾಪ್ ಆತ್ಮಹತ್ಯೆಗೆ ಯತ್ನ.! ಅಸಲಿ ಸಂಗತಿ ಏನು.? ಇಲ್ಲಿದೆ ಸ್ಪಷ್ಟನೆ
ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್‌ ಪ್ರತಾಪ್ ಆತ್ಮಹತ್ಯೆಗೆ ಯತ್ನ; ಆಗಿದ್ದೇನು?

ಬಿಗ್‌ ಬಾಸ್‌ ಮನೆಯಲ್ಲಿ ಡ್ರೋನ್‌ ಪ್ರತಾಪ್ ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಕೆಲವೇ ದಿನ ಇರುವಾಗಲೇ ಹೊಸ ಆತಂಕಕಾರಿ ಸಂಗತಿಯೊಂದು ತಿಳಿದು ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್‌ ಪ್ರತಾಪ್ ಅವರು ಆತ್ಮಹತ್ಯೆ ಯತ್ನಿಸಿದ್ದಾರೆ ಎಂಬ ವದಂತಿ ವೈರಲ್‌ ಆಗಿದೆ. ಆದರೀಗ ಈ ಬಗ್ಗೆ ಸ್ಪಷ್ಟನೆ ಕೂಡ ಕಲರ್ಸ್‌ ಕನ್ನಡ ಕೊಟ್ಟಿದೆ.

ʻʻಡ್ರೋನ್‌ ಪ್ರತಾಪ್ ಅವರದ್ದು ಸೂಸೈಡ್ ಅಟೆಂಪ್ಟ್ ಅಲ್ಲ. ಪ್ರತಾಪ್‌ ಅವರು ಎರಡು ದಿನದಿಂದ ಊಟ ಮಾಡಿರಲಿಲ್ಲ. ಹಾಗಾಗಿ ಫುಡ್ ಪಾಯಿಸನ್ ಆಗಿ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಇಂದು ಸಂಜೆ ವೇಳೆಗೆ ಬಿಗ್ ಬಾಸ್ ಮನೆಗೆ ಹಿಂದಿರುಗಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಯಾವುದೇ ಆತಂಕವಿಲ್ಲʼʼಎಂದು ಕಲರ್ಸ್‌ ವಾಹಿನಿ ಸ್ಪಷ್ಟನೆ ಕೊಟ್ಟಿದೆ. ಮನೆಯಲ್ಲಿ ಕೆಲವು ವಿಚಾರದಲ್ಲಿ ಪ್ರತಾಪ್ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಮಾತ್ರೆ ಸೇವಿಸಿದ್ದರು ಎನ್ನಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಅವರು ಆಗಾಗ ಸೈಲೆಂಟ್ ಆಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಪ್ಯಾನಿಕ್ ಆಗುತ್ತಾರೆ ಎನ್ನುವ ಅಭಿಪ್ರಾಯವೂ ಅನೇಕರದ್ದು. ಇದೇ ವಿಚಾರ ಇಟ್ಟುಕೊಂಡು ಮನೆಯಲ್ಲಿ ಟಾಸ್ಕ್​​ನಿಂದ ಹೊರಗೆ ಇಡಲಾಗಿದೆ. ‘ನನಗೆ ಒಂದು ಚಾನ್ಸ್ ಕೊಟ್ಟರೆ ತಾನೇ ಗೊತ್ತಾಗೋದು. ಪದೇಪದೆ ಪ್ಯಾನಿಕ್ ಆಗ್ತೀಯಾ ಎಂದರೆ ಅದು ಎಷ್ಟು ಸರಿ’ ಎಂದು ಪ್ರತಾಪ್ ಅವರು ಸಂಗೀತಾ ಹಾಗೂ ನಮ್ರತಾನ ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೊ ಕೂಡ ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್​ಬಾಸ್​ ಮನೆಗೆ ಹೊಸ ವರ್ಷದ ಮೊದಲ ದಿನದಂದು ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿ ಡ್ರೋನ್​ ಪ್ರತಾಪ್​ ಸಂಕಟ ಪಡುವಂತಹ ಭವಿಷ್ಯ ಹೇಳಿದ್ದರು. ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ನೇರವಾಗಿ ಹೇಳಿದರು. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿತ್ತು. ಅಂದಿನಿಂದ ಪ್ರತಾಪ್​ ತುಂಬಾ ಚಿಂತಿಸುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ವಾರವಷ್ಟೇ ಬಿಗ್​ಬಾಸ್​ ಮನೆಗೆ ಪ್ರತಾಪ್​ ಅವರ ತಂದೆ-ತಾಯಿ ಬಂದು ಹೋಗಿದ್ದರು. ಬಹಳ ಖುಷಿಪಟ್ಟಿದ್ದ ಪ್ರತಾಪ್​, ಸ್ವಾಮೀಜಿ ಭವಿಷ್ಯದಿಂದ ತುಂಬಾ ಕುಗ್ಗಿದ್ದರು. ಇದೀಗ ಅನಾರೋಗ್ಯ ಬಂದಿರುವುದು ಪ್ರತಾಪ್​ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಯಸುತ್ತಿದ್ದಾರೆ. 

ಅಂದಹಾಗೆ ಡ್ರೋನ್​ ಪ್ರತಾಪ್​ ಅವರು ಬಿಗ್​ಬಾಸ್​ಗೆ ಹೋದ ಮೇಲಂತೂ ಅವರ ಮೇಲೆ ಜನರಿಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಈ ಮೊದಲು ಪ್ರತಾಪ್​ ಬಗ್ಗೆ ಬರೀ ನೆಗಿಟಿವ್​ ಅಭಿಪ್ರಾಯಗಳೇ ಕೇಳಿಬರುತ್ತಿತ್ತು. ಆದರೆ, ಈಗ ಪ್ರತಾಪ್​ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅದಕ್ಕೆ ಕಾರಣ ದೊಡ್ಮನೆಯೊಳಗೆ ಪ್ರತಾಪ್​ ಆಡುತ್ತಿರುವ ರೀತಿ. ಎಲ್ಲ ಟಾಸ್ಕ್​ಗಳಲ್ಲೂ ಚೆನ್ನಾಗಿ ಆಡುತ್ತಿರುವ ಪ್ರತಾಪ್​ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜನರಿಗೆ ತಮ್ಮ ಮೇಲಿದ್ದ ಕೆಟ್ಟ ಅಭಿಪ್ರಾಯವನ್ನು ತೊಡೆದು ಹಾಕಿದ್ದಾರೆ. ಹೀಗಾಗಿ ಜಾಲತಾಣದಲ್ಲಿ ಪ್ರತಾಪ್​ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!