ಸುರತ್ಕಲ್: ಸಂಪನ್ನಗೊಂಡ 6ನೇ ವರ್ಷದ ಧರ್ಮ ಜಾಗೃತಿ ನಡೆ ಪಾದಯಾತ್ರೆ
ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಇದರ ಆಶ್ರಯದಲ್ಲಿ
ಕಾಂತೇರಿ ಧೂಮಾವತಿ ದೈವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಪಾದಯಾತ್ರೆ

ಸುರತ್ಕಲ್ : ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಸುರತ್ಕಲ್ ಇದರ ಆಶ್ರಯದಲ್ಲಿ 6ನೇ ವರ್ಷದ ಪಾದಯಾತ್ರೆ ಧರ್ಮ ಜಾಗೃತಿ ನಡೆ ಕಾಂತೇರಿ ಧೂಮಾವತಿ ದೈವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಯಶಸ್ವಿಯಾಗಿ ಸಂಪನ್ನಗೊ0ಡಿದೆ .

ಈ ಕಾರ್ಯಕ್ರಮಕ್ಕೆ ನಂದಾದೀಪವನ್ನು ಬೆಳಗಿಸಿ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ  ಆಸಣರು  ಕಟೀಲ್  ಇವರ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು. ಪಾದಯಾತ್ರೆಯ ಮೆರವಣಿಗೆಯಲ್ಲಿ ಭಜನೆ ಸಂಕೀರ್ತನೆ, ಚೆಂಡೆ ಯೊಂದಿಗೆ ಸಾಗಿತ್ತು. ಪಾದಯಾತ್ರೆಯ ದಾರಿಯುದ್ದಕ್ಕು ವಿವಿಧ ಸಂಘ ಸಂಸ್ಥೆಗಳಿ0ದ ಉಪಹಾರ ಮತ್ತು ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭ ಇಡ್ಯಾ  ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದ ಶಂಕರ್ ನಾರಾಯಣ್ ಭಟ್ ,ಕಾಂತೇರಿ ಧೂಮಾವತಿ ದೈವಸ್ಥಾನದ ಮಂಜು ಕಾವ( ಪಿ ಟಿ ರೈ) ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷರಾದ ಭಾಸ್ಕರ್ ಚಂದ್ರ ಶೆಟ್ಟಿ ಅಧ್ಯಕ್ಷರಾದ ಯಶೋಧರ ಚೌಟ, ಪ್ರಮುಖರಾದ ಕೊರಗಪ್ಪ ಶೆಟ್ಟಿ ಆಕಾಶಭವನ, ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರಾದ ಅಗರಿ ರಾಘವೇಂದ್ರರಾವ್, ಓಂಕಾರ ಘಟಕದ ಗೌರವಾಧ್ಯಕ್ಷರಾದ ನ್ಯಾಯವಾದಿ ಎಚ್. ವಿ ರಾಘವೇಂದ್ರ ರಾವ್, ಎಕ್ಕಾರ್ ಶಾಖೆಯ ಅಧ್ಯಕ್ಷರಾದ ಪ್ರವೀಣ್ ಆಚಾರ್ಯ ಹಾಗೂ ಓಂಕಾರ ಘಟಕ ಹಾಗೂ ಮಹಿಳಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ವಿವಿಧ ಶಾಖೆಗಳ ಪದಾಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!