ಸುರತ್ಕಲ್: ಫ್ರೆಂಡ್ಸ್ ಕೋಡಿಕೆರೆ (ರಿ), ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾವಾಹಿನಿ ಮಾತೃಮಂಡಳಿ ಹಾಗೂ ಭಗತ್ಸಿಂಗ್ ಶಾಖೆ ವತಿಯಿಂದ 22 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶನೀಶ್ವರ ಕಲ್ಪೋಕ್ತ ಪೂಜೆ ಫೆ. 10ರ ಶನಿವಾರ ಕೋಡಿಕೆರೆ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಳಗ್ಗೆ ಕೋಡಿಕೆರೆ ಬೆಳಿಗ್ಗೆ ಸಂಘದ ಅಧ್ಯಕ್ಷರಾದ ಭಾಗ್ಯಚಂದ್ರ ಭಟ್ ರವರ ಮೂಲಕ ನಾಗಬನದಲ್ಲಿ ಪೂಜೆ ನಡೆದು, ಮಧ್ಯಾಹ್ನ ಕೋಡಿಕೆರೆ ನೇತಾಜಿನಗರ ರಾಮಚಂದ್ರ ರಾವ್ ಅವರ ಮನೆಯಿಂದ ದುರ್ಗಾಪರಮೇಶ್ವರಿ ದೇವರ ಪೂಜೆಯ ಆಭರಣ, ಭಂಡಾರ ಕುಣಿತ ಭಜನೆ ಮೂಲಕ ಕೋಡಿಕೆರೆ ಮೈದಾನಕ್ಕೆ ಸಾಗಿತು. ಆ ನಂತರ ಸತ್ಯನಾರಾಯಣ ಪೂಜೆ, ಶನೀಶ್ವರ ಪೂಜೆ ಕಲ್ಪೋಕ್ತ ಪೂಜೆ ನಡೆಯಿತು. ಆ ನಂತರ ಭಜನೆ ನಡೆದು, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಮೂಲ್ಕಿ ದ ಕ ಇವರ ವತಿಯಿಂದ ನಾಡೂರ ನಾಗಬನ ಯಕ್ಷಗಾನ ಬಯಲಾಟ ನಡೆಯಿತು. ಈ ವೇಳೆ ಊರ ಪರವೂರ ಸಹಸ್ರಾರು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
Comments
0 comment