ಉಡುಪಿ: ಕಳೆದ ಐದಾರು ವರುಷಗಳಿಂದ ಕೂರ್ಮ ಬಳಗ ಎನ್ನುವ ಚಿಂತಕರ ಚಾವಡಿ ಕರಾವಳಿಯಲ್ಲಿ ವಿಭಿನ್ನ ಕಾರ್ಯಕ್ರಮಗಳಿಂದಲೇ ಹೆಸರುವಾಸಿಯಾಗಿದೆ. ಸಮಾನ ಚಿಂತಕರ ಬಳಗ ಕಟ್ಟಿಕೊಂಡು ವಿಚಾರ ಗೋಷ್ಟಿ, ಪುಸ್ತಕ ಬಿಡುಗಡೆ, ಚರ್ಚಾಕೂಟಗಳನ್ನು ಉಡುಪಿ ಕೇಂದ್ರಿತವಾಗಿ ನಡೆಸಿದ ಸಾರ್ಥಕತೆಯಿದೆ,
ಈ ಬಾರಿ ಕೂರ್ಮ ಬಳಗದ ಮತ್ತೊಂದು ವಿಭಿನ್ನ ಹೆಜ್ಜೆ ಇಟ್ಟಿದ್ದು 'ಆಜಾದ್ ಹಿಂದ್ - ಶಿವಾಜಿಯಿಂದ ನೇತಾಜಿವರೆಗೆ' ಕಾರ್ಯಕ್ರಮ ಫೆ.24 ರ ಶನಿವಾರದಂದು ಉಡುಪಿ ಅಜ್ಜರಕಾಡು ಪುರಭವನದಲ್ಲಿ ಸಂಜೆ ನಾಲ್ಕರಿಂದ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಬ್ಬರು ಪ್ರಬಲ ವಾಗ್ಮಿಗಳಿಂದ ಭಾಷಣ
ಶಿವಾಜಿ ಕಂಡ ಹಿಂದವಿ ಸ್ವರಾಜ್ಯದ ಜಾಗೃತಿಗಾಗಿ ಬದುಕನ್ನೇ ಸಮರ್ಪಿಸಿದ ಕ್ರಾಂತಿಕಾರಿ ಸಂತ ಡಾ. ಸಂದೀಪ್ ಮಹಿಂದ್ ಗುರೂಜಿ, ಖ್ಯಾತ ರಾಷ್ಟ್ರೀಯವಾದಿ, ಏಷ್ಯಾನೆಟ್ ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕರಾದ ಅಜಿತ್ ಹನುಮನಕ್ಕನವರ್ ಆಗಮಿಸಲಿದ್ದಾರೆ.
ಆ ನಂತರ ಖ್ಯಾತ ಗಾಯಕ ರಜತ್ ಮಯ್ಯ ಮತ್ತು ತಂಡದಿಂದ ರಾಷ್ಟ್ರಗೀತೆಗಳು ಸ್ವರಭಾರತಿ, ಶ್ರೀಮತಿ ಮಂಜರಿಚಂದ್ರ ಮತ್ತು ಕಲಾವಿದರಿಂದ ನೃತ್ಯರೂಪಕಗಳು ನಮೋ ನಮೋ ಭಾರತಾಂಬೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments
0 comment