ಬಜರಂಗದಳದ ಕಾರ್ಯಕರ್ತರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ ಆರ್ ಅಶೋಕ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಆರ್ ಅಶೋಕ್ ವಿರುದ್ಧ ಕ್ರಮಕ್ಕೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಮನವಿ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಹಾಗೂ ಕ್ಷೇತ್ರಿಯ ಸತ್ಸಂಗ ಪ್ರಮುಖ ಮಹಾಭಾಲೇಶ್ವರ್ ರವರು ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯೆಡಿಯೂರಪ್ಪ ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ರಾಜೇಶ್ ರವರನ್ನು ಭೇಟಿಯಾಗಿದ್ದು, ವಿಧಾನ ಸಭೆ ಅಧಿವೇಶನದಲ್ಲಿ "ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ" ಎನ್ನುವ ಮೂಲಕ ಲಘುವಾಗಿ ಮಾತಾನಾಡಿ ಹಿಂದೂ ಸಮಾಜದ ಮಾನ ಪ್ರಾಣ ಹಾಗೂ ಹಿರಿಮೆಗಾಗಿ ನಿಸ್ವಾರ್ಥವಾಗಿ ತಮ್ಮ ಮೇಲೆ ಕೇಸ್ ಗಳು ಬಿದ್ದರು ಜೈಲಿಗೆ ಹೋದರು ಎದೆಗುಂದದೆ ನಿರಂತರವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಬಜರಂಗದಳದ ಕಾರ್ಯಕರ್ತರಿಗೆ ನೋವುಂಟು ಮಾಡಿದ ಆರ್ ಅಶೋಕ್ ಅವರನ್ನು ತಕ್ಷಣ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಇಳಿಸಬೇಕು ಹಾಗೂ ರಾಜ್ಯದ ಹಿಂದೂ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
Comments
0 comment