ನಾಳೆ ಕಾಸರಗೋಡಿಗೆ ಸೇನಾ ನಾಯಕನ ಎಂಟ್ರಿ..! ಅಶ್ವಿನಿ ಅವರಿಗೆ ಬಲ ತುಂಬಲಿದ್ದಾರೆ ರಾಜನಾಥ್ ಸಿಂಗ್
ಏ. 17 ರಂದು ಸಪ್ತಭಾಷಾ ಸಂಗಮ ಭೂಮಿಯಲ್ಲಿ ರಕ್ಷಣಾ ಸಚಿವರ ಭರ್ಜರಿ ಪ್ರಚಾರ

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಂ.ಎಲ್. ಅಶ್ವಿನಿಯವರ ಪ್ರಚಾರಕ್ಕಾಗಿ ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ನಾಳೆ (ಏ.17ರಂದು) ಕಾಸರಗೋಡಿಗೆ ಆಗಮಿಸಲಿದ್ದಾರೆ. ಆ ಮೂಲಕ ಸಪ್ತ ಭಾಷಾ ಸಂಗಮದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬಲ ತುಂಬಲಿದ್ದಾರೆ. ಅಶ್ವಿನಿ ಅವರಿಗೆ ಆ ಮೂಲಕ ಸೇನಾ ನಾಯಕನ ಬಲ ಸಿಗಲಿದೆ. 

ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ತಾಳಿಪಡ್ಡು ಮೈದಾನದಲ್ಲಿ ನಡೆಯುವ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್‌ನಾಥ್ ಸಿಂಗ್ ಭಾಗವಹಿಸಿ ಮಾತನಾಡಲಿದ್ದಾರೆ. ಕೇಂದ್ರ ಸಚಿವರು ಭಾಗವಹಿಸುವ ಚುನಾವಣಾ ಪ್ರಚಾರ ವೇದಿಕೆ ನಿರ್ಮಾಣ ಅಂತಿಮ ಹಂತ ತಲುಪಿದೆ. ರಕ್ಷಣಾ ಸಚಿವರು ಆಗಮಿಸುತ್ತಿರುವ ಹಿನ್ನಲೆ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಚಿವರಿಗೆ ಬಿಗಿ ಭದ್ರತೆ ಒದಗಿಸಲು ಎನ್‌ಎಸ್‌ಜಿ ಪಡೆ ಈಗಾಗಲೇ ಕಾಸರಗೋಡಿಗೆ ಆಗಮಿಸಿ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. 

ರಾಜ್‌ನಾಥ್ ಸಿಂಗ್‌ರವರು ಕೇಂದ್ರ ರಕ್ಷಣಾ ಖಾತೆ ಸಚಿವರಾಗಿರುವ ಹಿನ್ನೆಲೆಯಲ್ಲಿ ನಾಳೆ ನಡೆಯುವ ಅವರ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸುವ ಸಿದ್ಧತೆಯಲ್ಲಿ ಈಗಾಗಲೇ ತೊಡಗಿದ್ದಾರೆ. ಇದಕ್ಕಾಗಿ ಹೆಚ್ಚುವರಿಯಾಗಿ ಕಣ್ಣೂರು, ವಯನಾಡು ಸೇರಿದಂತೆ ಸಮೀಪದ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕಾಸರಗೋಡಿಗೆ ಕರೆತರಲಾಗಿದೆ. ಕೇಂದ್ರ ಸಚಿವರು ಭಾಗವಹಿಸುವ ಕಾರ್ಯಕ್ರಮದ ವೇದಿಕೆ ಮತ್ತು ಪರಿಸರ ಪ್ರದೇಶಗಳಲ್ಲಿ ಪೊಲೀಸರು ಇಂದಿನಿ0ದಲೇ ತೀವ್ರ ನಿಗಾ ಇರಿಸಿಕೊಳ್ಳತೊಡಗಿದ್ದಾರೆ. ವೇದಿಕೆಯನ್ನು ಪದೇ ಪದೇ ಬಿಗಿ ತಪಾಸಣೆಗೊಳಪಡಿಸಲಾಗುತ್ತಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!