ಮಂಗಳೂರು ಉತ್ತರ ಭಾಜಪಾ ಯುವಮೋರ್ಚಾ ವತಿಯಿಂದ ದೀಪಾವಳಿ ಸಂಭ್ರಮ...
ಸುರತ್ಕಲ್

ಮಂಗಳೂರು ನಗರ ಉತ್ತರ ಭಾಜಪಾ ಯುವ ಮೋರ್ಚಾ ಆಯೋಜಿಸಿದ ದೀಪಾವಳಿ ಸಂಭ್ರಮ 2022 ರ ಅಂಗವಾಗಿ ನಡೆದ ಓಂಕಾರ ಧ್ವಜ ಯಾತ್ರೆಯಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಭಾರತಾಂಬೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಯಾತ್ರೆಯಲ್ಲಿ ಭಾಗವಹಿಸಿದರು.

ಕರ್ನಾಟಕ ಸೇವಾ ಸಂಘದ ವೀರ ಸಾವರ್ಕರ್ ವೇದಿಕೆ ಬಳಿಯಿಂದ ಆರಂಭವಾದ ಓಂಕಾರ ಧ್ವಜ ಯಾತ್ರೆ ಸುರತ್ಕಲ್ ಆರೋಗ್ಯ ಕೇಂದ್ರದಿಂದ ಶ್ರೀ ಮಹಾಲಿಂಗೇಶ್ವರ ಶಾಖೆಯಾಗಿ ರಾಷ್ಟ್ರೀಯ ಹೆದ್ದಾರಿಯಾಗಿ ಸುರತ್ಕಲ್ ಜಂಕ್ಷನ್ ನಲ್ಲಿ ಸಮಾಪನೆಗೊಂಡಿತು.

ಓಂಕಾರ ಧ್ವಜ ಯಾತ್ರೆಯಲ್ಲಿ ಪಕ್ಷದ ಮುಖಂಡರು, ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು, ಗಣ್ಯರು, ಭಜನಾ ತಂಡಗಳು ಭಾಗವಹಿಸಿದರು.

ಭಾಜಪಾ ಯುವಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಆಯೋಜಿಸಿದ ದೀಪಾವಳಿ ಸಂಭ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಗೋಪೂಜೆ ನೆರವೇರಿಸಿ ಗೋವುಗಳಿಗೆ ಆಹಾರ ತಿನ್ನಿಸಿದರು. 

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಯುವಮೋರ್ಚಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!