ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯ ಜುಮಾ ಮಸೀದಿಗೆ ಕಳ್ಳರು ನುಗ್ಗಿ 6ಕಾಣಿಕೆ ಹುಂಡಿಯಿಂದ ನಗದು ಕಳವುಗೈದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮಂಗಳವಾರ ಮಧ್ಯರಾತ್ರಿ ವೇಳೆ ಮಸೀದಿಯ ಪಕ್ಕದ ಕೋಣೆಯ ಒಂದರಲ್ಲಿದ್ದ ಪಿಕ್ಕಾಸು ಹಾರೆ ಯನ್ನು ಬಳಸಿ ಮಸೀದಿಯ ಆವರಣ ಗೋಡೆಯ ಮೇಲಿದ್ದ ಒಟ್ಟು 6ಕಾಣಿಕೆ ಹುಂಡಿಗಳನ್ನು ಒಡೆದು ನಗದು ಕಳವುಗೈಯಲಾಗಿದೆ ಕಳ್ಳತನದ ಕೃತ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಓರ್ವ ವ್ಯಕ್ತಿ ಕಳವುಗೈದಿರುವ ದೃಶ್ಯ ಕಂಡುಬಂದಿದೆ .ಮೊದಲು ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದು ಕಳ್ಳ ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚೀಲವನ್ನು ಚಿಲಕವನ್ನು ಒಡೆದು ಒಳಗೆ ನುಗ್ಗಿದ್ದಾನೆ.
ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾನೆ . ಮಸೀದಿ ಕಚೇರಿಯ ಬಾಗಿಲನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ ,ಸ್ಥಳಕ್ಕೆ ಶಾಸಕ ಯು ಟಿ ಖಾದರ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಕೃತ್ಯಕ್ಕೆ ಮಸೀದಿಗೆ ಸಂಬಂಧಿಸಿದ ಪಿಕ್ಕಾಸು ಹಾರೆ ಬಳಕೆ ಮಾಡಿ ಎಲ್ಲ ಕಾಣಿಕೆ ಡಬ್ಬಿಗಳನ್ನು ಕಳ್ಳತನ ಮಾಡಿರುವ ಸ್ಪಷ್ಟವಾಗಿ ಗಮನಿಸಿದರೆ ಮಾಹಿತಿ ಇರುವ ವ್ಯಕ್ತಿಯೇ ಕಳ್ಳತನ ನಡೆಸಿರುವ ಶಂಕೆ ವ್ಯಕ್ತ ಶಂಕೆಯಿದೆಯೆಂದು ಮಸೀದಿ ಕಾರ್ಯದರ್ಶಿ ಶಫೀಕ್ ತಿಳಿಸಿದ್ದಾರೆ.
Comments
0 comment