ಎಕ್ಕೂರು ಚರ್ಚ್ ಗೆ ಬನ್ನಿ ಎಂದವರು ಕಾವೂರು ಪೊಲೀಸರ ವಶ...!
ಮಂಗಳೂರು: ಹಿಂದು ಬಡ ಕುಟುಂಬದ ಸದಸ್ಯರಿಗೆ ಆಮಿಷವೊಡ್ಡಿ, ಎಕ್ಕೂರು ಚರ್ಚ್ ನಲ್ಲಿ ಕ್ರೈಸ್ತ ಧರ್ಮದ ಪ್ರಾರ್ಥನೆ ಮಾಡಲು ಬರುವಂತೆ ಹೇಳಿ ಮತಾಂತರ ಮಾಡಲು ಪ್ರೇರಣೆ ನೀಡುತ್ತಿದ್ದ ಇಬ್ಬರು ಕ್ರೈಸ್ತ ಮಹಿಳೆಯರನ್ನು ಕಾವೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾವೂರಿನಲ್ಲಿ ಬಡ ಹಿಂದೂ ಕುಟುಂಬವೊಂದನ್ನು ಕ್ರಿಶ್ಚಿಯನ್ ಧರ್ಮಕ್ಕೆ ಈ ಇಬ್ಬರು ಕ್ರೈಸ್ತ ಮಹಿಳೆಯರು ಮತಾಂತರಿಸಲು ಯತ್ನಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಹಿಂದು ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಕಾವೂರು ಪೋಲಿಸರು ಅವರನ್ನು ಬಂಧಿಸಿದ್ದಾರೆ. ಮಹಿಳೆಯರ ಬ್ಯಾಗಿನಲ್ಲಿ ಬೈಬಲ್ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕೆಲ ದಾಖಲೆಗಳು ಲಭ್ಯವಾಗಿದೆ.
ಬಂಧಿತರು ಹಿಂದು ಕುಟುಂಬದ ಸದಸ್ಯರ ಬಳಿ ಚರ್ಚ್ ಗೆ ಬಂದು ಬೈಬಲ್ ಓದಿದರೆ, ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗುವುದೆಂದು ತಿಳಿಸಿರುವುದಾಗಿ ತಿಳಿದು ಬಂದಿದೆ...
Comments
0 comment