ಸುರತ್ಕಲ್ ನಲ್ಲಿ ಮತಾಂಧನ ಅಟ್ಟಹಾಸ...
ಹಿಂದೂ ಮಹಿಳೆಗೆ ಮಾರಣಾಂತಿಕ ಹಲ್ಲೆ...

ಸುರತ್ಕಲ್ ಸಮೀಪದ ಕಾಟಿಪಳ್ಳ 2ನೇ ವಿಭಾಗದ ಮುಸ್ಲಿಂ ಸಮುದಾಯಕ್ಕೆ ಸೇರಿದ ನೂರ್ ಹುಲ್ ಶಾಲೆಯ ಕೆಲಸ ಮಾಡುವ ಹಿಂದೂ ಮಹಿಳೆಗೆ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಹನೀಫ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ...

ಕಾಟಿಪಳ್ಳ ನಾರಾಯಣಗುರು ಶಾಲೆಯ ನಿವಾಸಿ ಚಂದ್ರಕಲಾ ಎನ್ನುವವರು ಹಳ್ಳೆಗೀಡಾದ ಮಹಿಳೆ... ಚಂದ್ರಕಲಾ ಎನ್ನುವವರು ಹನೀಫ್ ಎಂಬಾತನ ಹೆಂಡತಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದು, ಅದನ್ನು ಹಿಂತಿರುಗಿಸುವಂತೆ ಚಂದ್ರಕಲಾ ಕೇಳುತ್ತಿದ್ದರು...

ಹೊರದೇಶ ದಲ್ಲಿ ಕೆಲಸ ಮಾಡುತ್ತಿದ್ದ ಹನೀಫ್ 2 ದಿನಗಳ ಹಿಂದೆ ಊರಿಗೆ ಮರಳಿದ್ದ... ಈ ಹಣಕಾಸಿನ ವಿಷಯ ತಿಳಿದ ಹನೀಫ್, ಏಕಾಏಕಿ ಶಾಲೆಗೆ ನುಗ್ಗಿ ಶಾಲಾ ಕೊಠಡಿಯಲ್ಲಿ ಹಲ್ಲೆ ನಡೆಸಿದ್ದಾನೆ... ಹಳ್ಳೆಯ ತೀವ್ರತೆಗೆ ಚಂದ್ರಕಲಾ ಅವರ ಕೈ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು, ಮತ್ತು ಇನ್ನಿತರ ಕಡೆ ಗಾಯಗಳಾಗಿವೆ...

ಆರೋಪಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ... ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!