ಮಂಗಳೂರು
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶನಿವಾರ ಮಧ್ಯಾಹ್ನ ಯುವತಿಯೊಬ್ಬಳು ಕುಡಿದು ರಂಪಾಟ ಮಾಡಿದ್ದು ಜನರ ಜೊತೆ ಅನುಚಿತವಾಗಿ ವರ್ತಿಸಿದ್ದಾಳೆ.
ಕುಡಿದ ಅಮಲೇರಿದ ಯುವತಿ ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸಿದ್ದು, ಒಟ್ಟಿಗೆ ಇದ್ದ ಯುವಕನಿಗೆ ಚಪ್ಪಲಿಯಿಂದಲೇ ತದುಕಿದ್ದಾಳೆ. ಯುವತಿಯ ಅನುಚಿತ ವರ್ತನೆಯಿಂದ ಬೇಸತ್ತ ಜನ ಆಕೆಯ ಮೇಲೆ ತಣ್ಣೀರು ಎರಚಿದ್ದು ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.
Comments
0 comment