ಮನೆ ಬಾಗಿಲ ಮುಂದೆ ಆನೆ - ವಿಡಿಯೋ ವೈರಲ್
ಮಂಗಳೂರು: ಕಾಡು ಮಾಯವಾಗುತ್ತ ಹೊಗುತ್ತಿರುವಂತೆ ನಾಡು ದೊಡ್ಡದಾಗುತ್ತಿದೆ. ಕಾಡಲ್ಲಿರಬೇಕಾದ ಪ್ರಾಣಿಗಳು ಆಹಾರ ಅರಸಿ ಹೊರಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೊಂದು ತಾಜಾ ಉದಾಹರಣೆ ಇಂದು ಬೆಳಗ್ಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಡಾನೆಯೊಂದು ಆಹಾರ ಅರಸಿ ಮನೆ ಮುಂಭಾಗಕ್ಕೆ ಬಂದಿದೆ.
ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಹೊಲ, ಗದ್ದೆ, ತೋಟಗಳಿಗೆ ನುಗ್ಗುತ್ತಿದ್ದ ಆನೆಗಳು ಮನೆ ಬಾಗಿಲಿಗೇ ಬರತೊಡಗಿವೆ. ಸಕಲೇಶಪುರದ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆಯೊಂದು ಇಂದು ಮನೆ ಬಾಗಿಲ ಮುಂದೆ ನಿಂತು ಆಹಾರಕ್ಕಾಗಿ ಎದುರು ನೋಡುತ್ತಿರುವ ಕರುಣಾಜನಕ ದೃಶ್ಯ ಕಂಡುಬಂದಿದೆ. ಲೋಕೇಶ್ ಎಂಬುವವರ ಮನೆ ಮುಂಭಾಗದಲ್ಲಿ ನಿಂತಿದ್ದ ಆನೆ ತುಂಬ ಹೊತ್ತು ನಿಂತು ಆಮೇಲೆ ಆಚೀಚೆ ತಿರುಗಿ ಅಲ್ಲಿಂದ ಮುಂದೆ ಹೋಗಿದೆ. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.
Comments
0 comment