ಮಂಗಳೂರು: ಶ್ರೀ ರಾಮ ಭಜನಾ ಮಂದಿರ (ರಿ.) ಇದರ 25ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಂಬ್ಯುಲೆನ್ಸ್ ಲೋಕಾರ್ಪಣೆಯು ಡಿಸೆಂಬರ್ 24ರ ಶನಿವಾರ ಪಿಲಿಕುಳ ನಿಸರ್ಗಧಾಮನಗರ ಮೂಡುಶೆಡ್ಡೆ ಇಲ್ಲಿ ನಡೆಯಿತು.
ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಸ್ಥಳೀಯ ಬಾಲಪ್ರತಿಭೆಗಳಿಂದ ಕಾರ್ಯಕ್ರಮಗಳು ನಡೆದು ನಂತರ ಗಣ್ಯರ ಸಮ್ಮುಖದಲ್ಲಿ ಅಂಬ್ಯುಲೆನ್ಸ್ ಲೋಕಾರ್ಪಣೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಸಾಂದಿಪನಿ ಮಠ ಶ್ರೀ ಕ್ಷೇತ್ರ, ಕೇಮಾರು ಇವರು ಅಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್ ಶೆಟ್ಟಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಮುಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕ ಉಮಾನಾಥ್ ಕೋಟ್ಯಾನ್, ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಹಾನಗರ ಪಾಲಿಕೆ ಸದಸ್ಯೆ ಹೇಮಲತಾ ರಘು ಸಾಲ್ಯಾನ್, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಮಹಾನಗರ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ, ಯಾದವ ಕೋಟ್ಯಾನ್ ದಿವ್ಯರೂಪ ಕಂಸ್ಟ್ರಕ್ಷನ್ ಕನ್ನಿಕ ನಿಲಯ ಪೆರ್ಮುದೆ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ರಮಾನಾಥ್ ಅತ್ತರ್, ಭಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಪ್ರವೀಣ್ ಆಳ್ವ ಉದ್ಯಮಿ ಮೈತ್ರಿ ಹಾರ್ಡ್ವೇರ್ ಪಂಪ್ವೆಲ್ ಮಂಗಳೂರು, ರಾಜ್ಕುಮಾರ್ ಶೆಟ್ಟಿ ತಿರುವೈಲ್ ಗುತ್ತು ವಾಮಂಜೂರು, ಶ್ರೀ ರಾಮಭಜನಾ ಇದರ ಅಧ್ಯಕ್ಷ ಮಂದಿರ ಉಮೇಶ್ ಸುವರ್ಣ ಉಪಸ್ಥಿತರಿದ್ದರು.
R.V ಫೌಂಡೇಶನ್ ಬೆಂಗಳೂರು ಇದರ ಚೇರ್ಮನ್ ರಾಹುಲ್ ವಿನಾಶಕಿಯ, ವಾಮಂಜೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ (JP), ಉದ್ಯಮಿ ಪ್ರದೀಪ್ ಶೆಟ್ಟಿ ಇವರು ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದರು...
Comments
0 comment