ಕುಳಾಯಿ: ಆದ್ಧೂರಿಯಿಂದ ಜರಗಿದ ಕುಲಾಲ ಸಂಘ ರಿ. ಕುಳಾಯಿ ಇದರ 35ನೇ ವಾರ್ಷಿಕೋತ್ಸವ, ಕ್ರೀಡಾಕೂಟ
ಆದ್ಧೂರಿಯಿಂದ ಜರಗಿದ ಕುಲಾಲ ಸಂಘ ರಿ. ಕುಳಾಯಿ ಇದರ 35ನೇ ವಾರ್ಷಿಕೋತ್ಸವ, ಕ್ರೀಡಾಕೂಟ

ಕುಳಾಯಿ: ಕುಲಾಲ ಸಂಘ ರಿ. ಕುಳಾಯಿ ಕುಲಾಲ ಮಹಿಳಾ ಮಂಡಲ ಕುಳಾಯಿ ಕುಲಾಲ ರಜತ ಸೇವಾ ಟ್ರಸ್ಟ್ ಕುಳಾಯಿ ಹಾಗೂ ಕರ್ನಾಟಕ ರಾಜ್ಯ ಕುಲಾಲ/ಕುಂಬಾರರ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ಕುಲಾಲ ಸಂಘ ರಿ. ಕುಳಾಯಿ ಇದರ 35ನೇ ವಾರ್ಷಿಕೋತ್ಸವದ ಅಂಗವಾಗಿ ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರ ವಾಲಿಬಾಲ್ ಮಾಂತ್ರಿಕ ದಿ| ನಾಗೇಶ್ ಎ. ರವರ ಸ್ಮರಣಾರ್ಥ ಕುಲಾಲ ಕ್ರೀಡಾಪಟುಗಳಿಗೆ ಸರ್ವಜ್ಞ ಟ್ರೋಫಿ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ ಕ್ರೀಡಾಕೂಟ ಆದ್ಧೂರಿಯಿಂದ ನಡೆಯಿತು.

ಗಣ್ಯರ ಸಮ್ಮಖದಲ್ಲಿ ಉದ್ಘಾಟನಾ ಸಮಾರಂಭ, ಸನ್ಮಾನ ಸಮಾರಂಭ ಹಾಗೂ ಕುಲಾಲ ಸಮಾಜದ ವಿಕಲಚೇತನ ಪ್ರತಿಭೆಗಳ ಪ್ರತಿಭಾ ಪ್ರದರ್ಶನ, ಪ್ರತಿಭಾ ಪುರಸ್ಕಾರ ಹೀಗೆ ಹಲವು ಕಾರ್ಯಕ್ರಮಗಳೊಂದಿಗೆ ಜರಗಿತು. ವಿಶೇಷ ಅತಿಥಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಚಿತ್ರ ನಟಿ ಸುಕನ್ಯಾ ವೈ.ಬಿ. ಆಗಮಿಸಿ ಜನರ ಗಮನ ಸೆಳೆದರು. 

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕುಲಾಲ/ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್‌ ವಹಿಸಿದ್ದರು. ಅತಿಥಿಗಳಾಗಿ ಶಾಸಕ ಡಾ| ವೈ. ಭರತ್‌ ಶೆಟ್ಟಿ, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಮಂಗಳೂರು ಇದರ ಅಧ್ಯಕ್ಷ ಮಯೂರ್‌ ಕುಲಾಲ್‌, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ (ರಿ.) ಇದರ ರಾಜ್ಯಾಧ್ಯಕ್ಷ ಶಿವಕುಮಾರ್‌ ಚೌಡ ಶೆಟ್ಟಿ, ಕೆ.ಪಿ.ಸಿ.ಸಿ ಇದರ ಕಾರ್ಯದರ್ಶಿ ಇನಾಯತ್‌ ಆಲಿ, ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನ್‌ (ರಿ.) ಇದರ ಅಧ್ಯಕ್ಷ ಡಾ|| ಅಣ್ಣಯ್ಯ ಕುಲಾಲ್‌ ಉಳ್ತೂರು, ಕಾರ್ಪೋರೇಟರ್‌ ವರುಣಾ ಚೌಟ, ಬರ್ಕೆ ಫ್ರೆಂಡ್ಸ್‌ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ವೀರ ನಾರಾಯಣ ಸೇವಾ ಟ್ರಸ್ಟ್‌ ಕುಲಶೇಖರ ಇದರ ಅಧ್ಯಕ್ಷ ಪ್ರೇಮಾನಂದ ಬಿ. ಕುಲಾಲ್‌ ಕೋಡಿಕಲ್‌, ಬಿಜೆಪಿ ಮಂಗಳೂರು ನಗರ ಉತ್ತರ ಇದರ ಉಪಾಧ್ಯಕ್ಷೆ ಬಬಿತಾ ರವೀಂದ್ರ, ಮಾಜಿ ಉಪಮೇಯರ್‌ ಪುರುಷೋತ್ತಮ ಚಿತ್ರಾಪುರ, ಬಿಜೆಪಿ ಹಿಂದುಳಿದ ಮೊರ್ಚಾ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಹೊಸಬೆಟ್ಟು, ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಉತ್ತರ ಇದರ ಅಧ್ಯಕ್ಷ ಸಂತೋಷ್‌ ಕುಲಾಲ್‌ ಪಕ್ಕಾಲು, ವಿಜಯ ಎಸ್‌ ಅಮೀನ್‌ ಹಾಗೂ ಕುಲಾಲ ಸಂಘ ರಿ. ಕುಳಾಯಿ ಇದರ ಅಧ್ಯಕ್ಷ ಮೋಹನ್‌ ಐ. ಮೂಲ್ಯ, ಕುಲಾಲ ರಜತ ಸೇವಾ ಟ್ರಸ್ಟ್‌ ಇದರ ಅಧ್ಯಕ್ಷ ನಾಗೇಶ ಕುಲಾಲ್‌, ಕುಲಾಲ ಮಹಿಳಾ ಮಂಡಳಿ ಇದರ ಅಧ್ಯಕ್ಷೆ ಭಾರತಿ ಗಂಗಾಧರ ಕೆ. ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!