ಪ್ರೇಯಸಿಯ ಬಯಕೆ ತೀರಿಸಲು  ಚಿನ್ನ ಎಗರಿಸಿದ ಯುವಕ
ಗೋವಾ ಬೀಚ್‌ನಲ್ಲಿ ಲವರ್ ಜತೆ ಜಾಲಿ ಮಾಡುತ್ತಿರುವಾಗ ಸಿಕ್ಕಿಬಿದ್ದ

ಪ್ರೇಯಸಿಯ ಆಸೆ ತೀರಿಸಲು ಹೋದ ಪ್ರೇಮಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯ ಹೆಸರು ಮಹಮ್ಮದ್ ಇರ್ಫಾನ್. ಬೆಂಗಳೂರಿನ ಆಡುಗೋಡಿ ನಿವಾಸಿ. ತಾಯಿ, ಅಣ್ಣ ಹಾಗೂ ಅತ್ತಿಗೆ ಜೊತೆ ಇರುವ ಈತ, ಮೂರು ಹೊತ್ತು ತಿನ್ನೋದು. ಉಂಡಾಡಿ ಗುಂಡನಂತೆ ಪ್ರೇಯಿಸಿ ಜೊತೆ ಸುತ್ತೋದಷ್ಟೇ ಕಾಯಕ. ಹೀಗೆ ಒಮ್ಮೆ ಪ್ರೇಯಸಿಗೆ ಏನ್​ ಬೇಕು ಅಂತ ಕೇಳಿದ್ದಾನೆ. ಅವಳು ಗೋವಾಗೆ ಹೋಗೋ ಆಸೆ ವ್ಯಕ್ತಪಡಿಸಿದ್ದಾಳೆ.

ಆದ್ರೆ, ಕೈಲಿ ನಯಾಪೈಸೆ ಇಲ್ಲದ ಇರ್ಫಾನ್, ತಾನಿದ್ದ ಮನೆಗೆ ಕನ್ನ ಹಾಕಿದ್ದಾನೆ. ರಾತ್ರಿ ಎಲ್ಲರೂ ಮಲಗಿದ್ದ ವೇಳೆ 103 ಗ್ರಾಮ್ ಚಿನ್ನಾಭರಣ ಎಗರಿಸಿದ್ದಾನೆ. ಬಳಿಕ ಗಿರವಿ ಅಂಗಡಿಯಲ್ಲಿಟ್ಟು, ಲಕ್ಷ ಲಕ್ಷ ಹಣ ತೆಗೆದುಕೊಂಡು ಪ್ರೇಯಸಿ ಜೊತೆ ಗೋವಾಗೆ ಜೂಟ್ ಆಗಿದ್ದಾನೆ.

ಮನೆಯಲ್ಲಿರೋ ಚಿನ್ನಾಭರಣ ಕಾಣೆಯಾಗ್ತಿದ್ದಂತೆ ಇರ್ಫಾನ್ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಗೆ ಬಂದು ಮಹಜರ್ ಮಾಡಿದ ಪೊಲೀಸರಿಗೆ, ಮನೆಯಲ್ಲಿ ಕಾಣದ ಇರ್ಫಾನ್ ಮೇಲೆ ಡೌಟ್ ಬಂದಿದೆ. ಆಗ ಮನೆಯವರು ಗೆಳೆಯರ ಜೊತೆ ಗೋವಾಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಆಗ ಪೊಲೀಸರ ಅನುಮಾನ ಮತ್ತಷ್ಟು ನಿಜವಾಗಿದೆ. ಕೂಡಲೇ ತಂಡ ರಚನೆ ಮಾಡಿ ಗೋವಾಕ್ಕೆ ತೆರಳಿದ ಪೊಲೀಸರು ಇರ್ಫಾನ್‌ನನ್ನ ಪತ್ತೆ ಹಚ್ಚಿದ್ದಾರೆ. ಪ್ರೇಯಸಿ ಜೊತೆ ಗೋವಾ ಬೀಚ್‌ನಲ್ಲಿ ಅಲೆದಾಡುತ್ತಿದ್ದ ಚೋರ ಇರ್ಫಾನ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾನೆ.

ಗೋವಾದಿಂದ ಇರ್ಫಾನ್‌ನನ್ನ ಕರೆತಂದ ಪೊಲೀಸರು, ಆತ ಗಿರವಿಯಿಟ್ಟಿದ್ದ ಚಿನ್ನವನ್ನು ರಿಕವರಿ ಮಾಡಿದ್ದಾರೆ. ಆದ್ರೆ ಪ್ರೇಯಸಿಯ ಬಯಕೆ ತೀರಿಸಲು ತಾನಿದ್ದ ಮನೆಗೆ ಕನ್ನ ಹಾಕಿ, ಪೊಲೀಸರ ಅತಿಥಿಯಾಗಿರೋದು ವಿಪರ್ಯಾಸ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!