ಮಂಗಳೂರು:  ತೊಕ್ಕೊಟ್ಟುವಿನ ಮಝೀನ್ ಅಬ್ದುಲ್ ರೆಹಮಾನ್ ಎನ್ಐಎ ವಶಕ್ಕೆ
ಟ್ರಯಲ್ ಬಾಂಬ್ ಪ್ರಕರಣ

ತೊಕ್ಕೊಟ್ಟುವಿನ ಮಝೀನ್ ಅಬ್ದುಲ್ ರೆಹಮಾನ್ ಎನ್ಐಎ ವಶಕ್ಕೆ

ಮಂಗಳೂರು: ಶಿವಮೊಗ್ಗ ಬಾಂಬ್ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಓರ್ವನನ್ನು ಎನ್ಐಎ ವಶಕ್ಕೆ ಪಡೆದಿದೆ.

ಬಂಧಿತನನ್ನು ಮಂಗಳೂರಿನ ತೊಕ್ಕೊಟ್ಟುವಿನ ಬಬ್ಬುಕಟ್ಟೆ ನಿವಾಸಿ ಮಝೀನ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಶಂಕಿತ ಉಗ್ರ ಮಾಝ್ ಮುನೀರ್ ನೀಡಿದ ಮಾಹಿತಿ ಯ ಆಧಾರದಲ್ಲಿ ಅಬ್ದುಲ್ ರೆಹಮಾನ್ ನ್ನು ಎನ್ ಐ ಎ ವಶಕ್ಕೆ ಪಡೆದಿದೆ.

ಅಲ್ಲದೆ ದಾವಣಗೆರೆಯ ಹೊನ್ನಾಳಿಯ ನೂರಾನಿ ಮಸೀದಿ ಹತ್ತಿರದ ದೇವನಾಯಕನಹಳ್ಳಿ ನಿವಾಸಿ ನದೀಮ್ ಅಹ್ಮದ್ ಕೆ.ಎ. ಎಂಬಾತನನ್ನು ಎನ್ಐಎ ಅರೆಸ್ಟ್ ಮಾಡಿದೆ.

ಮಾಜ್ ಮುನೀರ್, ಮಝಿನ್ ಅಬ್ದುಲ್ ರೆಹಮಾನ್ ನನ್ನು ನೇಮಕ ಮಾಡಿಕೊಂಡಿದ್ದು, ಸೈಯದ್ ಯಾಸಿನ್ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ನದೀಮ್ ಕೆ ಎ ನನ್ನು ನೇಮಕ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!