ಮಂಗಳೂರು:  ಗೋರಕ್ಷ ಪ್ರಮುಖ್ ರಾಜೇಶ್ ಸುವರ್ಣ ಸಜೀಪ ಸಂಶಯಾಸ್ಪದ ಸಾವು: ಉನ್ನತ ಮಟ್ಟದ ತನಿಖೆ ನಡೆಸಲು ಶರಣ್ ಪಂಪವೆಲ್ ಆಗ್ರಹ
ಗೋರಕ್ಷ ಪ್ರಮುಖ್ ರಾಜೇಶ್ ಸುವರ್ಣ ಸಜೀಪ ಸಂಶಯಾಸ್ಪದ ಸಾವು: ಉನ್ನತ ಮಟ್ಟದ ತನಿಖೆ ನಡೆಸಲು ಶರಣ್ ಪಂಪವೆಲ್ ಆಗ್ರಹ

ಮಂಗಳೂರು: ಕಲ್ಲಡ್ಕ ಪ್ರಖಂಡ ಗೋರಕ್ಷ ಪ್ರಮುಖ್ ರಾಜೇಶ್ ಸುವರ್ಣ ಸಜೀಪ ಇವರು ಪಾಣೆಮಂಗಳೂರು ಸೇತುವೆ ಬಳಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ. 

ಕಲಡ್ಕ ಪ್ರಖಂಡದ ಗೋರಕ್ಷಕ ಪ್ರಾಮುಕ್ ಹಾಗೂ ಸಜೀಪ ವಿಶ್ವ ಹಿಂದೂ ಪರಿಷತನ ಸಕ್ರಿಯ ಕಾರ್ಯಕರ್ತ ರಾಜೇಶ್ ಸುವರ್ಣ ಸಾನದಮನೆ ಇವರ ಮೃತದೇಹ ಇಂದು ಬೆಳಗ್ಗೆ ನೇತ್ರಾವತಿ ನದಿಯಲ್ಲಿ ಸಿಕ್ಕಿದ್ದು, ಆತ್ಮಹತ್ಯೆ ಎಂದು ಶಂಕಿಸಿದರು ಇದು ಅನುಮಾನಾಸ್ಪದ ಸಾವು ಎಂದು ಅಭಿಪ್ರಾಯಗಳು ಕೇಳಿ ಬಂದಿದೆ. ಇವರು ಸಮಾಜ ಮುಖಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದವರು. ಹಿಂದತ್ವದ ಪರ ನಿಷ್ಠೆಯಿಂದ ಸೇವೆ ಮಾಡಿದ್ದಾರೆ. ಇವರ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆದು ಇವರ ಸಾವಿಗೆ ನ್ಯಾಯ ಸಿಗಬೇಕು ಎಂಬುವುದು ಹಲವರ ಅಭಿಪ್ರಾಯವಾಗಿದ್ದು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ. 

ಮಂಗಳೂರು: ಹಿಂದು ಕಾರ್ಯಕರ್ತ ರಾಜೇಶ್ ಸುವರ್ಣ ಅನುಮಾನಾಸ್ಪದ ಸಾವು.!


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!