ತಾಯಿಯ ಅಂತ್ಯಸ0ಸ್ಕಾರ ನೆರವೇರಿಸಿ ಮನೆಗೆ ಮರಳಿದ್ದ ಮಗ, ದಿನಗಳೆಯುವಷ್ಟರಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಅಂಕೋಲಾದ ಅವರ್ಸಾದಲ್ಲಿ ಸಂಭವಿಸಿದೆ. ಕಾರವಾರ - ಅಂಕೋಲಾದಲ್ಲಿ ಬಹುಸಂಖ್ಯಾತರಾಗಿರುವ ಕೋಮಾರಪಂತ ಸಮಾಜದ ಗುರುಮನೆ, ಮೇತ್ರಿ ಕುಟುಂಬದ, ಯಜಮಾನತಿ ಶ್ರೀಮತಿ ಗಿರಿಜಾ ಗಿರಿಯಪ್ಪ ನಾಯ್ಕ ಫೆ 17 ರ ಶನಿವಾರ ರಾತ್ರಿ ವಿಧಿವಶರಾಗಿದ್ದು ಅವರ ಅಂತ್ಯಕ್ರಿಯೆಯನ್ನು ರವಿವಾರ ನೆರವೇರಿಸಲಾಗಿತ್ತು.
ಈ ವೇಳೆ ಸಾವಿರಾರು ಜನರು ಆಗಮಿಸಿ, ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ದರು. ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 3 ನೇ ಮಗ ನಾಗೇಶ ಗಿರಿಯಪ್ಪ ಮೇತ್ರಿ (58) ಮನೆಗೆ ವಾಪಸ್ಸಾಗಿದ್ದರು. ಇದಾಗಿ ದಿನ ಕಳೆಯುವುದರ ಒಳಗೆ ಆ ಕುಟುಂಬದ ದುರ್ದೈವವೋ ಎಂಬ0ತೆ ನಾಗೇಶ ಮೇತ್ರಿ ಗೆ ಹೃದಯಾಘಾತವಾಗಿ ಅಸುನೀಗಿದ್ದಾರೆ.
ತಾಯಿಯ ಅಗಲುವಿಕೆ ದುಃಖ ಮತ್ತು ಹೃದಯಾಂತರದ ನೋವು ತಡೆದುಕೊಳ್ಳಲಾಗದೇ ಮಗನೂ ಹೃದಯಾಘಾತದಿಂದ ಸಾವನ್ನಪ್ಪಿರುವುದು, ತಾಯಿ ಮತ್ತು ಮಗನ ಪ್ರೀತಿ ವಾತ್ಸಲ್ಯದ ಬಂಧನವೋ ಅಥವಾ ಇಬ್ಬರ ಸಾವು ಕಾಕತಾಳೀಯವೋ ಇಲ್ಲವೇ ವಿಧಿಯಾಟವೋ ಎಂಬ ಪ್ರಶ್ನೆ ಹಲವರಲ್ಲಿ ಮೂಡುವಂತಾಗಿದೆ. ಕಲೆ- ಸಂಪ್ರದಾಯ, ಧಾರ್ಮಿಕ ಆಚಾರ ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿರುವ ಮೇತ್ರಿ ಮನೆತನದ ಮಹಾತಾಯಿ ಗಿರಿಜಾ ಮತ್ತು ಅವರ ಮಗ ನಾಗೇಶ್ ಮೇತ್ರಿ ನಿಧನಕ್ಕೆ ಶಾಸಕ ಸತೀಶ ಸೈಲ್ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲೆಯ ಹಲವು ಗಣ್ಯರು, ಸಮಾಜದ ಪ್ರಮುಖರು, ಅವರ್ಸಾ ಗ್ರಾಮಸ್ಥರು ಹಾಗೂ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
Comments
0 comment