‘ತೇಜಸ್ವಿ ಸೂರ್ಯ ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ’- ಕಂಗನಾ ಶಾಕಿಂಗ್ ಹೇಳಿಕೆ.! ಯಾಕೆ ಈ ರೀತಿ ಹೇಳಿದ್ರು?
‘ತೇಜಸ್ವಿ ಸೂರ್ಯ ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ’- ಕಂಗನಾ ಶಾಕಿಂಗ್ ಹೇಳಿಕೆ.! ಯಾಕೆ ಈ ರೀತಿ ಹೇಳಿದ್ರು?

ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಹೀಗೆ ಭಾಷಣದ ವೇಳೆ ವಿರೋಧ ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ಎಡವಟ್ಟುವೊಂದನ್ನು ಮಾಡಿಕೊಂಡಿದ್ದಾರೆ.

ಹೌದು, ಮಂಡಿ ಲೋಕಸಭಾ ಕ್ಷೇತ್ರದ ಸರ್ಕಾಘಾಟ್ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ನಟಿ ಕಂಗನಾ ರಣಾವತ್, ಸಂಸದ ತೇಜಸ್ವಿ ಸೂರ್ಯ ಅವರು ಮೀನು ತಿಂತಾರೆ, ಗೂಂಡಾಗಿರಿ ಮಾಡ್ತಾರೆ ಎಂದು ಹೇಳಿದ್ದಾರೆ. ಆದರೆ ಆರ್ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರನ್ನು ಟೀಕಿಸುವ ಭರದಲ್ಲಿ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಮಾತಾಡಿದ್ದಾರೆ.

ಹೀಗೆ ತೇಜಸ್ವಿ ಯಾದವ್ ಹೆಸರು ಹೇಳುವ ಬದಲು ಸಂಸದ ತೇಜಸ್ವಿ ಸೂರ್ಯ ಎಂದ ಹೇಳಿ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರ ಜೊತೆಗೆ ರಾಹುಲ್ ಗಾಂಧಿ ಅವರೂ ಎಲ್ಲಿಗೆ ಬರುತ್ತಾರೆ. ಎಲ್ಲಿಗೆ ಹೋಗುತ್ತಾರೆ ಎಂಬುವುದು ಅವರಿಗೇ ಗೊತ್ತಿಲ್ಲ ಅಂತ ವ್ಯಂಗ್ಯವಾಗಿ ಮಾತಾಡಿದ್ದಾರೆ. ಸದ್ಯ ನಟಿ ಕಂಗನಾ ರಣಾವತ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನಟಿ ಕಂಗನಾ ಏನೂ ಹೇಳುತ್ತಿದ್ದಾರೆ ಅಂತಾ ಅವರಿಗೆ ಗೊತ್ತಾಗುತ್ತಿಲ್ಲ ಅಂತಾ ಕಮೆಂಟ್ ಮಾಡುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!