ಉಡುಪಿ: ಮಾತ್ರೆ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು
ಮಾತ್ರೆ ಸೇವಿಸಿ ಯುವಕ ಮೃತ್ಯು

ಉಡುಪಿ: ಮಾತ್ರೆ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕುತ್ಪಾಡಿ ಗ್ರಾಮದ ರಮೇಶ್ ಎಂಬವರ ಮಗ ಅಜಯ್(24) ಎಂದು ಗುರುತಿಸಲಾಗಿದೆ.

ಉದ್ಯಾವರ ಎಸ್‌ಡಿಎಂ ಕಾಲೇಜಿನ ಫಾರ್ಮಸಿ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ಎ.1ರಂದು ಕೆಲಸಕ್ಕೆ ಹೋಗದೇ ಹುಷಾರಿಲ್ಲವೆಂದು ಮನೆಯಲ್ಲಿಯೇ ಇದ್ದರು. ಬೆಳಗ್ಗೆ ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಯ್, ತನ್ನ ಸ್ನೇಹಿತ ಉದಯ್ ಬಳಿ ನಾನು ಟ್ಯಾಬ್ಲೆಟ್ ತೆಗೆದುಕೊಂಡಿ ರುವುದಾಗಿ ಹೇಳಿದ್ದು, ಯಾವ ಕಾರಣಕ್ಕೆ ಹಾಗೂ ಯಾವ ಮಾತ್ರೆ ಎಂದು ಹೇಳಿಲ್ಲ ಎನ್ನಲಾಗಿದೆ. 

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಯ್ ಚಿಕಿತ್ಸೆ ಫಲಕಾರಿ ಯಾಗದೆ ಎ.3ರಂದು ನಸುಕಿನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!