ಮಂಗಳೂರು: ದನದ ಮಾಂಸ ಸಹಿತ ಸಿಕ್ಕಿಬಿದ್ದ ಆರೋಪಿಗಳು ಅರೆಸ್ಟ್.!
ಗೋವುಗಳನ್ನು ವಧಿಸಿ ಮಾಂಸ ಮಾರಾಟ - ನಾಲ್ಕು ಮಂದಿಯ ಬಂಧನ

ಮಂಗಳೂರು: ಕಳವುಗೈದ ದನಗಳನ್ನು ವಧಿಸಿ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ. 

ಕಣ್ಣೂರು ಕುಂಡಾಲದ ಬದ್ರುದ್ದೀನ್ (65), ಅಬ್ದುಲ್ ಮಜೀದ್(43), ಖಲೀಲ್(35), ಹರೇಕಳದ ಮುಹಮ್ಮದ್ (56) ಬಂಧಿತ ಆರೋಪಿಗಳು. 

ಕುಂಡಾಲದಲ್ಲಿರುವ ಬದ್ರುದ್ದೀನ್‌ನ ಮನೆಯಲ್ಲಿ ಆರೋಪಿಗಳು ಕಳವು ಮಾಡಿಕೊಂಡು ಬಂದ ದನಗಳನ್ನು ವಧಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದ್ದು, ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುಮಾರು 32,850 ರೂ. ಮೌಲ್ಯದ ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ 5 ಮಂದಿ ಆರೋಪಿಗಳಿದ್ದು, ಅವರ ಬಂಧನಕ್ಕೆ ಪ್ರಯತ್ನ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!