ಪಡುಬಿದ್ರಿ: ಉದ್ಯಾವರ ಗ್ರಾಮದ ವ್ಯಕ್ತಿಯೋರ್ವರು ಅತಿಯಾದ ಅಸೂಯೆಯಿಂದ ತನ್ನ ಮನೆ ಪಕ್ಕದ ನಿರ್ಮಾಣ ಹಂತದ ಮನೆ ಹಾಗೂ ಆವರಣ ಗೋಡೆಗೆ ಹಾನಿ ಎಸಗಿ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಸಂಭವಿಸುವಂತ್ತಾಗಿದ್ದು, ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಬಂಧಿಯಾಗಿದೆ.
ಉದ್ಯಾವರ ನಿವಾಸಿ ಪರಮೇಶ್ವರ ಎಂಬ ವ್ಯಕ್ತಿಯೋರ್ವರು ತನ್ನ ಜಾಗದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು ಇದನ್ನು ಸಹಿಸದ ಪಕ್ಕದ ಮನೆಯ ನಿವಾಸಿ ರಮೇಶ್ ಎಂಬಾತ ಅವರಿಗೆ ನಿರಂತರ ಕಿರುಕುಳ ಕೊಡುತ್ತಿದ್ದ ಹಿನ್ನಲೆಯಲ್ಲಿ ಮನೆ ಬಿಟ್ಟ ಅವರು ಕುಟುಂಬ ಸಮೇತ ಉಡುಪಿ ಕಿನ್ನಿಮುಲ್ಕಿಯ ಬಾಡಿಗೆ ಮನೆಯಲ್ಲಿ ವಾಸಿಸಲಾರಂಭಿಸಿದರು, ಅಲ್ಲಿಂದ ದಿನನಿತ್ಯ ಹೊಸ ಮನೆ ಕಾಮಗಾರಿಯನ್ನು ವೀಕ್ಷಿಸಿ ಹೋಗುತ್ತಿದ್ದು, ಇದೀಗ ಬಂದಾಗ ಮನೆಗೆ ಕಟ್ಟಿದ ಆವರಣ ಗೋಡೆಯ ಒಂದು ಪಾಶ್ವ ಸಹಿತ ಅಡುಗೆ ಮನೆಯ ಗೋಡೆಗೂ ಹಾನಿ ಎಸಗಿದ್ದು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಹಚ್ಚಾಗಿದ್ದು ನರೆಮನೆಯಾತನಿಂದ ಒಂದು ಲಕ್ಷ ನಷ್ಟ ಸಂಭವಿಸಿದೆ ಎಂಬುದಾಗಿ ಮನೆಯಜಮಾನ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
0 comment