ಉಡುಪಿ: ನಿರ್ಗತಿಕ ಹಾಗೂ ದಿವ್ಯಾಂಗ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆಗಾಗಿ ಹಣ ಸಂಗ್ರಹ
ಟೀಮ್ ಭಗತ್ ಸಿಂಗ್ ವತಿಯಿಂದ "ಗೊಂಬೆ ವೇಷ"

ಉಡುಪಿ: ಟೀಮ್ ಭಗತ್ ಸಿಂಗ್ ಉಡುಪಿ ಇದರ ಆಶ್ರಯದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗೊಂಬೆ ವೇಷ ಮೂಲಕ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆಗಾಗಿ ಹಣ ಸಂಗ್ರಹ ಮಾಡಲಿದ್ದಾರೆ. 

ಉಡುಪಿ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ನಿರ್ಗತಿಕ ಮತ್ತು ದಿವ್ಯಾಂಗ ಮಕ್ಕಳ ವೈದ್ಯಕೀಯ ನೆರವಿಗೆ ಹಣಕಾಸಿನ ಸಹಾಯ ಮಾಡಲು ಈ ತಂಡದಿಂದ 19-09-2023 ಮತ್ತು 20-09-2023ರಂದು ಗೊಂಬೆ ವೇಷ ನಡೆಯಲಿದೆ. 

ಸಹಾಯ ಮಾಡಲು ಇಚ್ಛಿಸುವ ಬಂಧುಗಳು ಇಲ್ಲಿ ನೀಡಿರುವ ಕ್ಯುಆರ್ ಮೂಲಕ ಕೊಡ್ ಮೂಲಕ ಧನ ಸಹಾಯ ಮಾಡುವಂತೆ ಟೀಮ್ ಭಗತ್ ಸಿಂಗ್ ಮನವಿ ಮಾಡಿದ್ದಾರೆ.

ಉಡುಪಿಯ ಸ್ಥಳೀಯ ಯುವಕರ ತಂಡ ಈ ರೀತಿಯ ಸಮಾಜ ಸೇವೆಯ ಕಾರ್ಯದಲ್ಲಿ ತೊಡಗಿಕೊಂಡು ಈ ಮೂಲಕ ಬಡವರ ಸಹಾಯಕ್ಕೆ ನಿಂತಿರುವುದು ಶ್ಲಾಘನೀಯ ಹಾಗೂ ಇಂತಹ ಕಾರ್ಯ ಎಲ್ಲಾ ಯುವಕರ ತಂಡಗಳು ಮಾಡಬೇಕು ಎನ್ನುವುದು ನಮ್ಮ ಆಶಯ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!