ಸುರತ್ಕಲ್: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಸಂಸ್ಥೆಯಿಂದ ಚಿಕಿತ್ಸಾ ವೆಚ್ಚಕಾಗಿ  ಸಹಾಯಧನ ಹಸ್ತಾಂತರ
ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಕಾಟಿಪಳ್ಳ ನಿವಾಸಿ ಶಶಿಧರ್ ಇವರಿಗೆ ತಿಂಗಳ ಸೇವಾ ಯೋಜನೆಯ ಚೆಕ್ ಹಸ್ತಾಂತರ

ಸುರತ್ಕಲ್ : ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಟಿಪಳ್ಳ ನಿವಾಸಿ ಶಶಿಧರ್ ಇವರ ಚಿಕಿತ್ಸೆಯ ವೆಚ್ಚಕ್ಕಾಗಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಸಂಸ್ಥೆಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಂಸ್ಥೆ ಇಂದು ಆಸ್ಪತ್ರೆಗೆ ಭೇಟಿ ನೀಡಿ, ಸಂಸ್ಥೆಯ ಸದಸ್ಯರ ಸಮ್ಮುಖದಲ್ಲಿ ಈ ತಿಂಗಳ ಸೇವಾ ಯೋಜನೆಯಾಗಿ 25,000 ರೂಪಾಯಿ ಚೆಕ್ ಹಸ್ತಾಂತರಿಸಿದ್ದಾರೆ.


ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಸಂತ ಹೊಸಬೆಟ್ಟು , ಬಜರಂಗದಳ ಸುರತ್ಕಲ್ ಪ್ರಖಂಡ ಸಹ ಸಂಚಾಲಕ ಸುನಿಲ್ ತೋಕೂರು, ಮಂಜಣ್ಣ ಸೇವಾ ಬ್ರಿಗೇಡ್ ನ ಸದಸ್ಯರುಗಳಾದ ದಯಾನಂದ್ ಕೋಡಿಕೆರೆ, ನಾಗೇಶ್ ಶೆಟ್ಟಿ ತೋಕೂರು, ಕೀರ್ತನ್ ಆಳ್ವ ತೋಕೂರು, ಗಂಗಾಧರ್ ಶೆಟ್ಟಿ ತೋಕೂರು ಪಸ್ಥಿತರಿದ್ದರು.

 

ದಿವಂಗತ ಮಂಜುನಾಥ್ ಮಂಗಳೂರು ಸವಿನೆನಪಿಗಾಗಿ ಹುಟ್ಟಿಕೊಂಡಂತಹ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆಯು ಅಶಕ್ತರ ಪಾಲಿನ ಆಶಾಕಿರಣವಾಗಿ ತನ್ನ ಸೇವಾ ಕಾರ್ಯದ ಮುಖಾಂತರ ಮಂಗಳೂರು ಜಿಲ್ಲೆಯಲ್ಲೇ ಒಂದು ಮಾದರಿ ಸಂಸ್ಥೆಯಾಗಿ ಹೆಸರು ಪಡೆಯುತ್ತಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!