ಮಣಿಪಾಲ:  ಗ್ಯಾರೇಜ್‌ನಲ್ಲಿ ನಡೆದ ಅವಘಡ - ಬಸ್ ಮಾಲೀಕ ಮೃತ್ಯು
ಸ್ವಂತ ಬಸ್ ಚಕ್ರದಡಿ ಸಿಲುಕಿ ಬಸ್ ಮಾಲಕ ದಾರುಣ ಸಾವು

ಮಣಿಪಾಲ: ತನ್ನ ಸ್ವಂತ ಬಸ್ ನ ಚಕ್ರದಡಿ ಸಿಲುಕಿ ಬಸ್ ಮಾಲಕ ದಾರುಣವಾಗಿ ಮೃತಪಟ್ಟ ಘಟನೆ ಆತ್ರಾಡಿ ಬಳಿಯ ಗ್ಯಾರೇಜ್ ಒಂದರಲ್ಲಿ ನಡೆದಿದೆ. ಮಾಂಡವಿ ಬಸ್ ಮಾಲಕ ದಯಾನಂದ್ ಶೆಟ್ಟಿ ಮೃತ ದುರ್ದೈವಿ.

ದಯಾನಂದ್ ಶೆಟ್ಟಿ ಅವರು ರಿಪೇರಿಗೆ ನಿಲ್ಲಿಸಿದ್ದ ಬಸ್ ಅನ್ನು ಪರಿಶೀಲಿಸಲು ಗ್ಯಾರೇಜ್ ಗೆ ಬಂದಿದ್ದರು. ಈ ವೇಳೆ ಅವರು ಬಸ್ ಮುಂದೆ ನಿಂತಿರುವ ಅರಿವಿಲ್ಲದೆ ಮೆಕ್ಯಾನಿಕ್ ಬಸ್ ಚಲಾಯಿಸಿದ್ದಾನೆ. ಪರಿಣಾಮ ಮುಂದೆ ನಿಂತಿದ್ದ ದಯಾನಂದ್ ಅವರ ಮೇಲೆ ಬಸ್ ನ ಚಕ್ರಗಳು ಹರಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!