ಮುಲ್ಕಿ
ಪಾದಾಚಾರಿ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪ ನಡೆದಿದೆ...
ಕಿನ್ನಿಗೋಳಿ ಚರ್ಚ್ ಕಡೆಯಿಂದ ಮಹಿಳೆಯೋರ್ವರು ಅಂಗಡಿ ಸಾಮಾ ಮತ್ತು ತರಕಾರಿ ತೆಗೆದುಕೊಂಡು ರಸ್ತೆಯ ಬದಿ ನಡೆದುಕೊಂಡು ಬರುತ್ತಿರುವ ಸಂಧರ್ಭ ಕಿನ್ನಿಗೋಲಿಯಿಂದ ಮೂರುಕಾವೇರಿ ಕಡೆಗೆ ಸಂಚರಿಸುತ್ತಿದ್ದ ಕೆಂಪು ಬಣ್ಣದ ಬ್ರೀಜಾ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ..
ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಅನತಿ ದೂರಕ್ಕೆ ಉರುಳಿದ್ದು ಮಹಿಳೆ ಗಂಭೀರ ಗಾಯಗೊಂಡ ಆಸ್ಪತ್ರೆ ದಾಖಲಾಗಿದ್ದಾರೆ...
ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದು ಕಾರಿನಲ್ಲಿದ್ದವರೂ ಗಾಯಗೊಂಡಿದ್ದಾರೆ...
ಪಾದಚಾರಿ ಮಹಿಳೆ ಕೆಮ್ರಾಲ್ ಮನೋಲಿಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ತಿಳಿದುಬಂದಿದೆ..
ಗಾಯಾಳುಗಳಿಗೆ ಸ್ಥಳೀಯ ಅಂಗಡಿ ಮಾಲೀಕರಾದ ಆಲ್ವಿನ್, ಸ್ಯಾನಿ ಪಿಂಟೋ, ಶೈಲಾ ಸಿಕ್ವೇರಾ ಆಸ್ಪತ್ರೆ ಸಾಗಿಸಲು ಸಹಕರಿಸಿದ್ದಾರೆ... ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Comments
0 comment