ಉಳ್ಳಾಲ, ಸೆ.19: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಸಹ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನ ಮೊಗರು ಕ್ರಾಸ್ ಬಳಿ ನಡೆದಿದೆ.
ತೊಕ್ಕೊಟ್ಟು ಅಂಬಿಕಾರೊಡ್ನಲ್ಲಿರುವ ವೈನ್& ಡೈನ್ ಬಾರ್ ನ ಮ್ಯಾನೇಜರ್ ಚಿಕ್ಕಮಗಳೂರು ಜಿಲ್ಲೆ ಯ ಹರಣೆ ನಿವಾಸಿ ಪ್ರತಾಪ್ ಶೆಟ್ಟಿ (32) ಮೃತ ಯುವಕ . ಪ್ರತಾಪ್ ಅವರ ಚಿಕ್ಕಮ್ಮನ ಮಗ ವೈನ್ & ಡೈನ್ ಬಾರ್ ಕೌಂಟರ್ ಬಾಯ್ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗ ನಿವಾಸಿ ಅಭಿ ಶೆಟ್ಟಿ (22) ಗಂಭೀರ ಸ್ಥಿತಿಯಲ್ಲಿ ನಗರದ ಇಂಡಿಯನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಂಗಿಪೇಟೆಯ ಬಾರ್ ಒಂದರಲ್ಲಿ ಪ್ರತಾಪ್ ಅವರ ಅಣ್ಣ ಮ್ಯಾನೇಜರ್ ಆಗಿದ್ದು ಪ್ರತಾಪ್ ಮತ್ತು ಅಭಿ ಕೆಲಸ ಮುಗಿಸಿ ಪ್ರತಾಪ್ ಅವರು ಅವರ ಅಣ್ಣ ನ ಕೊಠಡಿ ಗೆ ಹೊರಟಿದ್ದು ಜಪ್ಪಿನ ಮೊಗರು ಮಹಾಕಾಳಿ ಪಡು ಕ್ರಾಸ್ ಬಳಿ ವೇಗದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು ಸ್ಥಳದಿಂದ ಬಹಳ ದೂರ ಎಸೆಯಲ್ಪಟ್ಟದ್ದು ಸವಾರ ಪ್ರತಾಪ್ ಶೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ . ಸಹ ಸಾವರ ಅಭಿ ಸ್ಥಿತಿಯೂ ಚಿಂತಾಜನಕವಾಗಿದೆ . ಸಹ ಸವಾರ ಅಭಿ ಅವರನ್ನು ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ.
Comments
0 comment