ಗಾಂಜಾ ನಶೆಗೆ ತನ್ನ ತಾಯಿ, ಅಣ್ಣನ ಮೇಲೆ ತಲವಾರು ದಾಳಿ
ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಗಾಂಜಾ ನಶೆಗೆ ಯುವಕ ತನ್ನ ತಾಯಿ ಮತ್ತು ಅಣ್ಣನ ಮೇಲೆ ತಲವಾರು ದಾಳಿ ನಡೆಸಿದ ಘಟನೆ ನಡೆದಿದೆ.
ಹರೀಶ್ ಎಂಬಾತ ತನ್ನ ತಾಯಿ ಮತ್ತು ಅಣ್ಣನಿಗೆ ತಲವಾರು ದಾಳಿ ನಡೆಸಿದ್ದಾನೆ. ದಾಳಿಗೆ ಒಳಗಾದವರು ವಾರಿಜಾ ಮತ್ತು ಕೃಷ್ಣಕುಮಾರ್ ಎನ್ನಲಾಗಿದ್ದು, ಗಂಭೀರ ಗಾಯಗೊಂಡ ಮಹಿಳೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೋರ್ವನನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments
0 comment