ಭಯೋತ್ಪಾದಕರ ಜತೆ ಸಂಬಂಧ   ಹೊಂದಿದ್ದ ಇಬ್ಬರ ಬಂಧನ...
ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡದಿಂದ ಕಾರ್ಯಾಚರಣೆ...

ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆಯೊಮದಿಗೆ ಸಂಬಂಧ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಇಬ್ಬರು ಮುಸ್ಲಿಮ್ ಯುವಕರನ್ನು ಬಂಧಿಸಿದ್ದು, ಇನ್ನಬ್ಬನಿಗೆ ಶೋಧ ಕಾರ್ಯ ಮುಂದಿವರಿದಿದೆ.

 ಮಂಗಳೂರಿನ 22 ವರ್ಷ ಪ್ರಾಯದ ಮಾಜ್ ಮುನೀರ್ ಅಹಮ್ಮದ್ ಹಾಗೂ ಶಿವಮೊಗ್ಗ ಜಿಲ್ಲೆಯ ಸಿದ್ದೇಶ್ವರ ನಗರದ 21 ವರ್ಷ ಪ್ರಾಯದ ಸಯ್ಯದ್ ಯಾಸೀನ್ ಎಂಬುವವರು ಪೊಲೀಸ್ ಬಂದನಕ್ಕೊಳಕಾದವರು. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಪರಿಸರದ ನಿವಾಸಿ ಶಾರೀಕ್ ಮತ್ತು ಆತನ ಜತೆಗಾರರಾದ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಹೊಂದಿದ್ದ ಕಾರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಇಬ್ಬರನ್ನೂ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗದೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!