ದಕ್ಷಿಣ ಕನ್ನಡದಲ್ಲೂ ಸ್ಪೋಟಕ್ಕೆ ತಯಾರಿ ನಡೆಸಿದ್ದರೇ ಭಯೋತ್ಪಾದಕರು?
ಬಂಟ್ವಾಳದಲ್ಲಿ ಉಗ್ರರಿಂದ ಬ್ಲಾಸ್ಟಿಂಗ್ ರಿಹರ್ಸಲ್
ದಕ್ಷಿಣ ಕನ್ನಡದಲ್ಲೂ ಸ್ಪೋಟಕ್ಕೆ ತಯಾರಿ ನಡೆಸಿದ್ದರೇ ಭಯೋತ್ಪಾದಕರು?
ಬಂಟ್ವಾಳ: ಮಂಗಳೂರು ಶಿವಮೊಗ್ಗದಲ್ಲಿ ಬಂಧನವಾಗಿ ಪೊಲೀಸ್ ವಶದಲ್ಲಿರುವ ಶಂಕಿತ ಉಗ್ರ ಮಾಝ್ ಅಹ್ಮದ್ ನನ್ನು ಬುಧವಾರ ಪೊಲೀಸರು ಬಂಟ್ವಾಳಕ್ಕೆ ಕರೆ ತಂದಿದ್ದಾರೆ.
ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಶಂಕಿತ ಉಗ್ರನನ್ನು ಬಂಟ್ವಾಳಕ್ಕೆ ಕರೆ ತಂದಿದ್ದು, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನಾವೂರ ಸಮೀಪದ ಸುಲ್ತಾನ್ ಕಟ್ಟೆ ಅಗ್ರಹಾರ ಬಳಿ ಮಹಜರು ನಡೆಸುತ್ತಿದ್ದಾರೆ.
ಸ್ಥಳ ಮಹಜರು ವೇಳೆ ಶ್ವಾನ ದಳ ಮತ್ತು ಬಾಂಬ್ ಸ್ಜ್ವಾಡ್ ಮೂಲಕ ಪರಿಶೀಲನೆ ನಡೆಸಲಾಗಿದ್ದು, ಈ ಜಾಗಗಳಲ್ಲಿ ಬಾಂಬ್ ಬ್ಲಾಸ್ಟಿಂಗ್ ರಿಹರ್ಸಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
Comments
0 comment