ಮೂಲ್ಕಿ: ಶಿಮಂತೂರು ಮತ್ತು ಎಳತ್ತೂರು ಗ್ರಾಮಸ್ಥರ ರಾಜನ್ ದೈವ, ಶ್ರೀ ಧರ್ಮ ಜಾರಂದಾಯ, ಬಂಟ ದೈವಗಳ ತಕ್ಕಣಪಾದೆ ನವೀಕೃತ ಶಿಲಾಮಯ ದೈವಸ್ಥಾನದ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಸಿರಿಸಿಂಗಾರದ ನೇಮೋತ್ಸವ
ದಿನಾಂಕ: 12-03-2023 - 13-03-2023

ಮೂಲ್ಕಿ : ಶಿಮಂತೂರು ಮತ್ತು ಎಳತ್ತೂರು ಗ್ರಾಮಸ್ಥರ ರಾಜನ್ ದೈವ, ಶ್ರೀ ಧರ್ಮ ಜಾರಂದಾಯ ಹಾಗೂ ಬಂಟ ದೈವಗಳ ತಕ್ಕಣಪಾದೆ ನವೀಕೃತ ಶಿಲಾಮಯ ದೈವಸ್ಥಾನದ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಸಿರಿಸಿಂಗಾರದ ನೇಮೋತ್ಸವವು ದಿನಾಂಕ: 12-03-2023ನೇ ಆದಿತ್ಯವಾರ ಮತ್ತು ದಿನಾಂಕ 13-03-2023ನೇ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿದೆ ನಡೆಯಲಿದೆ.

ದಿನಾಂಕ 13-03-2023ನೇ ಸೋಮವಾರದಂದು ಬೆಳಗ್ಗೆ ಗಂಟೆ 10.20ರ ವೃಷಭ ಲಗ್ನದ ಸುಮುರ್ಹೂತದಲ್ಲಿ ಶಿಮಂತೂರು ಮತ್ತು ಎಳತ್ತೂರು ಗ್ರಾಮಸ್ಥರ ರಾಜನ್ ದೈವ, ಶ್ರೀ ಧರ್ಮ ಜಾರಂದಾಯ ಹಾಗೂ ಬಂಟ ದೈವಗಳ ತಕ್ಕಣಪಾದೆ ನವೀಕೃತ ಶಿಲಾಮಯ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭ ಕಲಶಾಭಿಷೇಕ ಮತ್ತು ಸಿರಿ ಸಿಂಗಾರದ ನೇಮೋತ್ಸವವು ಶಿಮಂತೂರು ವೇದಮೂರ್ತಿ ಶ್ರೀ ವಿಷ್ಣುಮೂರ್ತಿ ಭಟ್ರ ನೇತೃತ್ವದಲ್ಲಿ ಜರಗಲಿದೆ.

ಆ ಪ್ರಯುಕ್ತ ಸರ್ವ ಊರ ಮತ್ತು ಪರವೂರ ದೈವ ಭಕ್ತಾಭಿಮಾನಿಗಳು ಆಗಮಿಸಿ, ಶ್ರೀ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಳತ್ತೂರು ಗುತ್ತಿನಾರ್‌ ಹಾಗೂ ತಕ್ಕಣಪಾದೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸರ್ವಸದ್ಯಸರು ವಿನಂತಿಸಿಕೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!