ಉಡುಪಿ: ಕೋಳಿ ಅಂಕಕ್ಕೆ ಪೊಲೀಸ್ ರೈಡ್ -  ನಾಲ್ವರು ವಶಕ್ಕೆ.!
ಬೆಳಪು ಕೋಳಿ ಅಂಕಕ್ಕೆ ದಾಳಿ ನಾಲ್ವರು ವಶಕ್ಕೆ

ಉಡುಪಿ: ಬೆಳಪು ಗ್ರಾಮದ ಮಲೆ ಜುಮಾದಿ ದೈವಸ್ಥಾನದ ಬಳಿ ನಡೆಯುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಶಿರ್ವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಬ್ರಹ್ಮಾವರ ಬೈಕಾಡಿ ಪಡು ತೆಂಕುಮನೆ ನಿವಾಸಿ ಅರುಣ್ ಶೆಟ್ಟಿ(41), ಪಾಂಗಾಳ ಗುಡ್ಡೆ ಅಕ್ಕು ತೋಟ ನಿವಾಸಿ ಸುರೇಶ್ ಪೂಜಾರಿ (55), ಮೂಳೂರು ದಡ್ಡಿನಗುಜ್ಜಿ ಗೋಪಾಲ ನಿಲಯ ನಿವಾಸಿ ನಿಕ್ಷಿತ್(19), ಉಚ್ಚಿಲ ಬಡ ಗ್ರಾಮ ಭಾಸ್ಕರ್ ನಗರ ನಿವಾಸಿ ರವಿ ಪೂಜಾರಿ(47) ಎಂದು ಗುರುತಿಸಲಾಗಿದೆ.

ಕೋಳಿ ಅಂಕ ಸ್ಪರ್ಧೆ ವೇಳೆ ಚೂರಿ ತಗಲಿ ಓರ್ವ ವ್ಯಕ್ತಿ ಸಾವು | ಪ್ರತಿದಿನ ಪ್ರತಿಕ್ಷಣ

ಆರೋಪಿಗಳಿಂದ 6900  ರೂಪಾಯಿ ಹಾಗೂ ಅಕ್ರಮ ಕೂಟಕ್ಕೆ ಬಳಸಲಾದ ಕೋಳಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!