ಮಂಗಳೂರು: ಚೈತ್ರಾ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ; ಶರಣ್ ಪಂಪ್ ವೆಲ್
ಚೈತ್ರ ಕುಂದಾಪುರಳಿಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ – ಶರಣ್ ಪಂಪ್ ವೆಲ್

ಮಂಗಳೂರು: ಚೈತ್ರ ಕುಂದಾಪುರಳಿಗೂ ವಿಶ್ವಹಿಂದೂ ಪರಿಷತ್ ಗೂ ಯಾವುದೇ ಸಂಬಂಧವಿಲ್ಲ, ನಾವು ಕೇವಲ ಅವಳನ್ನು ಭಾಷಣಕ್ಕೆ ಮಾತ್ರ ಕರೆಯುತ್ತಿದ್ದೆವು ಎಂದು ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ. 

ಮಂಗಳೂರಿನಲ್ಲಿ ಮಾತನಾಡಿದ ಅವರು ಚೈತ್ರ ಕುಂದಾಪುರ ಚೆನ್ನಾಗಿ ಭಾಷಣ ಮಾಡುತ್ತಾರೆ ಎಂದು ನಮ್ಮ ಸಂಘಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಅದು ಬಿಟ್ಟರೆ ನಮ್ಮ ಸಂಘಟನೆಗೂ ಅವಳಿಗೆ ಯಾವುದೇ ಸಂಬಂಧವಿಲ್ಲ ಎಂದು ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

ಈಗಾಗಲೇ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಆಗಲಿ ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇ ಬೇಕು. ಈ ರೀತಿ ಪ್ರಕರಣಗಳಿಗೆ ನಮ್ಮ ಸಂಘಟನೆಗಳು ಯಾವುದೇ ರೀತಿ ಸಹಕಾರ ನೀಡುವುದಿಲ್ಲ ಎಂದರು.

ಗುರುಪುರ ಸ್ವಾಮಿಜಿ ಎರಡು ತಿಂಗಳ ಹಿಂದೆಯೇ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ತಿಳಿಸಿದ್ದಾರೆ. ಸಿಸಿಬಿ ಅವರು ತನಿಖೆ ನಡೆಸುತ್ತಿದ್ದಾರೆ ತಪ್ಪಿತಸ್ಥರನ್ನು ಅರೆಸ್ಟ್ ಮಾಡಿ ನಮ್ಮದೇನು ಅಭ್ಯಂತರವಿಲ್ಲ ಎಂದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!