ಪುತ್ತೂರು: ಯುವಕ ನೇಣು ಬಿಗಿದು ಆತ್ಮಹತ್ಯೆ.!
ಭರತ್‌ ಕಲ್ಲರ್ಪೆ ನೇಣು ಬಿಗಿದು ಜೀವಾಂತ್ಯ

 

ಪುತ್ತೂರು : ಹೈದರಾಬಾದ್‌ ನಲ್ಲಿ ಕೆಲಸಕ್ಕಿದ್ದ ಯುವಕ ಊರಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಪ್ಯ ಬಳಿ ನಡೆದಿದೆ.

ಮೃತರನ್ನು ಶ್ರೀಧರ್‌ ಆಚಾರ್ಯ ಸಂಪ್ಯ ಇವರ ಪುತ್ರ, ಪತ್ರಕರ್ತ ಗಣೇಶ್‌ ಕಲ್ಲರ್ಪೆ ಅವರ ಸಹೋದರ ಭರತ್‌ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ.

ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭರತ್‌ ಕಲ್ಲರ್ಪೆ ಹೈದರಾಬಾದ್‌ ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಅಣ್ಣನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ಹೈದರಾಬಾದ್‌ ಗೆ ತೆರಳಿದ್ದು, ಡಿ.12ರಂದು ಮತ್ತೆ ಮನೆಗೆ ಬಂದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!