ಮಂಗಳೂರು: ಬಸ್‌ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ಪ್ರಕರಣ; ಯುವಕನಿಂದ ದೂರು ದಾಖಲು
ದೂರು ದಾಖಲು

ಮಂಗಳೂರು: ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದ ಮುಸ್ಲಿಂ ಯುವಕನಿಗೆ ಸಾರ್ವಜನಿಕವಾಗಿ ಗೂಸಾ ಬಿದ್ದ ಪ್ರಕರಣ ಯುವಕ ಸೈಯದ್‌ ರಶೀಮ್‌ ಉಮರ್‌ (20) ಎಂಬಾತ  ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ ಘಟನೆ ನಡೆದಿದೆ.

ಸೈಯದ್‌ ರಶೀಮ್‌ ಉಮರ್‌ ಎಂಬಾತ ಕಾರ್ಕಳದ ಖಾಸಗಿ ಕಾಲೇಜಿನ ಹಿಂದು ಯುವತಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಂತೂರು ಬಳಿ ಬಸ್‌ ತಡೆದು ಮಂಗಳೂರು ಬಜರಂಗದಳ ಕಾರ್ಯಕರ್ತರು ವಿಚಾರಿಸಿದ್ದಾರೆ. ಈ ವೇಳೆ ಯುವಕನಿಗೆ ಸಾರ್ವಜನಿಕವಾಗಿ ಗೂಸಾ ಬಿದ್ದಿದೆ ಎನ್ನಲಾಗಿದೆ. ಸದ್ಯ ಯುವಕ 3-4 ಮಂದಿ ಅಪರಿಚಿತರ ತಂಡವೊಂದು ಬಸ್ಸಿನಿಂದ ಎಳೆದು ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಂಡ ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್‌ ರಶೀಮ್‌ ಉಮರ್‌ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

"ಲವ್‌ ಜಿಹಾದ್‌" ವಿರುದ್ಧ ಗುಡುಗಿದ ಬಜರಂಗದಳ ಜಿಲ್ಲಾ ಸಂಚಾಲಕ

https://youtu.be/jw44g8L9s10

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!