ಉಗ್ರನ ಅಡಗುತಾಣದಲ್ಲೇ ಗುಂಡಿನ ಮೊರೆತ ಕುಳಿತೇ ಬೇಟೆಯಾಡಿದ ಹಿಂದೂ ಡಾನ್?
ದಸರಾ ಶುಭ ಕಾಲದಲ್ಲೇ ಐಎಸ್ಐ ಏಜೆಂಟ್ ನ ಸಂಹಾರ ಉಗ್ರನ ಅಡಗುತಾಣದಲ್ಲೇ ಗುಂಡಿನ ಮೊರೆತ ಕುಳಿತೇ ಬೇಟೆಯಾಡಿದ ಹಿಂದೂ ಡಾನ್?

ದಸರಾ ಶುಭ ಕಾಲದಲ್ಲೇ ಐಎಸ್ಐ ಏಜೆಂಟ್ ನ ಸಂಹಾರ ಉಗ್ರನ ಅಡಗುತಾಣದಲ್ಲೇ ಗುಂಡಿನ ಮೊರೆತ ಕುಳಿತೇ ಬೇಟೆಯಾಡಿದ ಹಿಂದೂ ಡಾನ್? ಮಂಗಳೂರು: ದೇಶದ ಆಂತರಿಕ ಭದ್ರತೆಗೆ ಬಹಳಷ್ಟು ಸಮಸ್ಯೆ ತಂದೊಡ್ಡುತ್ತಿರುವ, ಭಯೋತ್ಪಾದಕ ಚಟುವಟಿಕೆಗಳ ಮೂಲಕ ದೇಶವನ್ನು ಅಭದ್ರತೆಯ ಕೂಪಕ್ಕೆ ತಳ್ಳಲು ಇನ್ನಿಲ್ಲದ ವಿಫಲ ಪ್ರಯತ್ನ ಮಾಡುತ್ತಲೇ ಇರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ -ಐಎಸ್ಐ ಏಜೆಂಟ್ ಒಬ್ಬನ ಸಂಹಾರ ಆಗಿದೆ. 

ದಸರಾ ಶುಭ ಸಂದರ್ಭದಲ್ಲೇ ಉಗ್ರನೊಬ್ಬನ ವಧೆ ಆಗಿದ್ದು ಇದರ ಹಿಂದೆ ದೇಶಪ್ರೇಮಿ ಹಿಂದೂ ಡಾನ್ ಒಬ್ಬರ ಕೈಚಳಕವಿದೆ ಎನ್ನಲಾಗಿದೆ. ನೇಪಾಳದ ಕಠ್ಮಂಡುವಿನಲ್ಲಿ ಉಗ್ರನ ಅಡಗುತಾಣಕ್ಕೇ ನುಗ್ಗಿ ತಂಡವೊಂದು ಆತನ ಸಂಹಾರ ಮಾಡಿದ್ದು ದುಷ್ಟ ಸಂಹಾರದ ನೆನಪೊಂದು ಸುಳಿಯುವಂತಾಗಿದೆ. ಭಾರತದಲ್ಲಿ ನಕಲಿ ನೋಟುಗಳನ್ನು ಅತಿ ಹೆಚ್ಚಾಗಿ ಪೂರೈಕೆ ಮಾಡುತ್ತಿದ್ದ ವಿತರಕ ಲಾಲ್ ಮೊಹಮ್ಮದ್ ಎಂಬಾತನಿಗೆ ಆತನ ಅಡಗುತಾಣದಲ್ಲೇ ತಂಡವೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿರುವ ಉಗ್ರನ ಅಡಗುತಾಣದ ಮುಂದೆ ಐಷಾರಾಮಿ ಕಾರಿನಲ್ಲಿ ಬಂದು ಲಾಲ್ ಮೊಹಮ್ಮದ್ ಇಳಿಯುತ್ತಿದ್ದಾಗಲೇ ಇಬ್ಬರು ಗುಂಡಿನ ದಾಳಿ ಮಾಡಿದ್ದಾರೆ. ಕಾರಿನೊಳಗೆ ಬಚ್ಚಿಡಲು ಲಾಲ್ ಮೊಹಮ್ಮದ್ ಪ್ರಯತ್ನಪಟ್ಟರೂ  ಬಿಡದೆ ಆತನನ್ನು ವಧಿಸಿದ್ದಾರೆ. ಐಎಸ್ಐ ಸೂಚನೆಯಂತೆ ಲಾಲ್ ಮೊಹಮ್ಮದ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುದ್ರಣವಾಗುತ್ತಿದ್ದ ಭಾರತದ ನಕಲಿ ಕರೆನ್ಸಿಗಳನ್ನು ನೇಪಾಳಕ್ಕೆ ಸಾಗಿಸಿ ಭಾರತದಲ್ಲಿರುವ ಏಜೆಂಟರಿಗೆ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಲಾಲ್ ಮೊಹಮ್ಮದ್ ಐಎಸ್ಐ ಏಜೆಂಟ್ ಆಗಿರುವ ಜೊತೆಗೆ ದಾವೂದ್ ಇಬ್ರಾಹಿಂನ ಡಿ ಗ್ಯಾಂಗ್ ಜೊತೆಗೂ ಸಂಪರ್ಕ ಸಾಧಿಸಿ ಅವರಿಗೂ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ.

ಲಾಲ್ ಮೊಹಮ್ಮದ್ ವಧೆಯಲ್ಲಿ ಹಿಂದೂ ಡಾನ್ ಉದಯ ಶೆಟ್ಟಿ ಅವರು ಭಾಗಿಯಾಗಿದ್ದಾರೆಂದು ನೇಪಾಳದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಉದಯ ಶೆಟ್ಟಿ ಎಂಬುವವರು ನೇಪಾಳದಲ್ಲಿ ಜೈಲಿನಲ್ಲಿದ್ದುಕೊಂಡೇ ದೇಶದ್ರೋಹಿಗಳ ಸಂಹಾರ ಮಾಡುವಲ್ಲಿ ನಿಷ್ಣಾತರಾಗಿದ್ದು ಹಲವರಿಗೆ ಸಿಂಹಸ್ವಪ್ನರಾಗಿದ್ದರು. ಈಗಾಗಲೇ ಯೂನಿಸ್ ಅನ್ಸಾರಿ ಎಂಬ ಉಗ್ರನನ್ನು ನೇಪಾಳ ಜೈಲಿನಲ್ಲೇ ಉದಯ ಶೆಟ್ಟಿ ಫಿನಿಶ್ ಮಾಡಿದ್ದರು. ಸಿಂಹದ ಕೋಟೆಯೊಳಗೆ ನರಸಿಂಹನ ಬೇಟೆಯಂತೆ. ಜಮೀರ್ ಶಾ ಎಂಬಾತನ ಹತ್ಯೆಯಲ್ಲೂ ಉದಯ ಶೆಟ್ಟಿಯವರ ಹೆಸರು ಕೇಳಿಬಂದಿದ್ದು ಲಾಲ್ ಮೊಹಮದ್ ಹತ್ಯೆಯಲ್ಲೂ ಇವರ ಪಾತ್ರದ ಬಗ್ಗೆ ನೇಪಾಳ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!