ಸುರತ್ಕಲ್‌: ನೇಣುಬಿಗಿದು ವಿವಾಹಿತ ಆತ್ಮಹತ್ಯೆ
ವಿವಾಹಿತ ಆತ್ಮಹತ್ಯೆ

ಸುರತ್ಕಲ್‌: ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಶಿವಗಿರಿ ನಗರದಲ್ಲಿ ವ್ಯಕ್ತಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಕುಶಲ್‌ ಕುಮಾರ್‌ (45) ಮೃತ ಯುವಕ. ರಾತ್ರಿ ಪತ್ನಿ, ಮಗುವಿನೊಂದಿಗೆ ಮಲಗಿದ್ದರು. ಮಗು ಕೂಗಿದ ಶಬ್ದಕ್ಕೆ ಪತ್ನಿ ಎಚ್ಚರಗೊಂಡಾಗ ಪತಿ ಸಿಲೀಂಗ್‌ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡದ್ದು, ಗಮನಕ್ಕೆ ಬಂದಿದೆ. ಪೈಂಟಿಗ್‌ ಕೆಲಸಕ್ಕೆ ಹೋಗುತ್ತಿದ್ದ ಅವರು ಆರ್ಥಿಕ ದುಸ್ಥಿತಿಯಿಂದ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.

ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!