ಸದಾಶಿವ ಪೂಜಾರಿ ಅವರಿಗೆ ಗೌರವ....!
ಮಂಗಳೂರು: 32 ವರ್ಷಗಳಿಂದ ದೈವದ ಪಾತ್ರಿಯಾಗಿ ದೈವದ ಸೇವೆಯಲ್ಲಿ ತೊಡಗಿರುವ ಕಾವೂರು ಗಾಂಧಿನಗರದ ಸದಾಶಿವ ಪೂಜಾರಿ ಅವರನ್ನು ಲಯನ್ಸ್ ಕ್ಲಬ್ ಕುಡ್ಲ ಮಂಗಳೂರು ವತಿಯಿಂದ ಶನಿವಾರ ಗೌರವಿಸಲಾಯಿತು.
ಲಯನ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಜಾನಪದ ಕಲಾವಿದರ ಗೌರವಾರ್ಪಣೆ ನಿಮಿತ್ತ ಸದಾಶಿವ ಪೂಜಾರಿ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಜ್ಞಾನೇಶ್ ಆಳ್ವ, ಕಾರ್ಯದರ್ಶಿ ಸುನೀಲ್, ಹಿರಿಯರಾದ ರಮೇಶ್ ಶೆಟ್ಟಿ ವಿವೇಕನಗರ, ಸೌಹಾರ್ದ ಸಹಕಾರಿಯ ವಿಶೇಷ ಅಧಿಕಾರಿ ಗುರುಪ್ರಸಾದ್ ಬಂಗೇರ ಹಾಜರಿದ್ದರು.
Comments
0 comment