ಮಂಗಳೂರು: ಆಭರಣ ತಯಾರಿಕ ಘಟಕದಿಂದ 6.30 ಲಕ್ಷ ರೂ. ಮೌಲ್ಯದ ಚಿನ್ನ ಕಳವು
ಆಭರಣ ತಯಾರಿಕ ಘಟಕದಿಂದ 6.30 ಲಕ್ಷ ರೂ. ಮೌಲ್ಯದ ಚಿನ್ನ ಕಳವು

ಮಂಗಳೂರು: ಆಭರಣ ತಯಾರಿಕ ಘಟಕದ ಬೀಗ ಮುರಿದು ಒಳನುಗ್ಗಿದ ಕಳ್ಳರು 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ನ. 25ರಂದು ಕೆಳಾರ್ಕಳಬೆಟ್ಟುವಿನಲ್ಲಿ ನಡೆದಿದೆ.

ಚಿನ್ನಾಭರಣ ತಯಾರಿಕಾ ಘಟಕದ ವ್ಯವಸ್ಥಾಪಕ ದೀಪಕ್ ರಾಮದಾಸ್ ನಾಯಕ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ನವೆಂಬರ್ 25 ರಂದು ಬೆಳಿಗ್ಗೆ ಕಂಪನಿಯಲ್ಲಿ ಕೆಲಸ ಮಾಡುವ ಮಂಗಳದೀಪ್ ಮೊಂಡಲ್ ಎಂಬುವರಿಂದ ಕರೆ ಬಂದಿದ್ದು, ಆಭರಣ ತಯಾರಿಕ ಘಟಕದ ಬೀಗವನ್ನು ಯಾರೋ ಒಬ್ಬರು ಒಡೆದು ಒಳ ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ. ಅಭರಣ ತಯಾರಿಸಲು ಇಟ್ಟಿದ್ದ ಚಿನ್ನ ಹಾಗೂ ಅರ್ಧ ತಯಾರಿಸಿದ ನೆಕ್ಲೆಸ್ ಹಾಗೂ ಮೇಣದಲ್ಲಿ ಇರಿಸಿದ ಚಿನ್ನ ಹೀಗೆ ಒಟ್ಟು ತೂಕ 126 ಗ್ರಾಂ ತೂಕದ ಚಿನ್ನ ಕಳವು ಆಗಿದ್ದು, ಇದ ಮೌಲ್ಯ 6.30 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!