ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ದುರ್ಗಾ ದೌಡ್.
ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ದುರ್ಗಾ ದೌಡ್.

ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕಡಿಯಾಳಿಯಿಂದ ಅರಂಭಗೊಂಡ ದುರ್ಗಾಡೌಡ್ ಕಾರ್ಯಕ್ರಮದ ಮೆರವಣಿಗೆಯು ಉಡುಪಿ ಶ್ರೀ ಕ್ರಷ್ಣ ಮಠದ ಪಾರ್ಕಿಂಗ್ ಎದುರಿನ ಮೈದಾನದಲ್ಲಿ ಸಮಾರೊಪ ಸಮಾರಭದ ಮೂಲಕ ಮುಕ್ತಾಯಗೊಂಡಿತು.

ಪ್ರಾಸ್ತವಿಕ ಬಾಷಣಗೈದ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿಯವರು ಹಿಂದು ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಹಿಂದು ಜಾಗರಣ ವೇದಿಕೆ ಜಿಹಾದಿಗಳಿಗೆ ನೀಡಿದ ಉತ್ತರಗಳ ಬಗ್ಗೆ ಸವಿವರಣೆಯನ್ನು ನೀಡಿ ದೇಶ ದ್ರೋಹಿ ಸಂಘಟನೆಗಳಾದ pfi kfd ಮುಂತಾದ ಸಂಘಟನೆಗಳನ್ನು ಮಟ್ಟಹಾಕ ಬೇಕೆಂದು ಕರೆ ಕೊಟ್ಟರು.

ಈ ಸಂದರ್ಭ ಶ್ರಿಕಾಂತ್ ಶೆಟ್ಟಿಯವರ ಯಹೋದಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ದಿಕ್ಸೂಚಿ ಬಾಷಣಗೈದ ಗುಜರಾತ್ ಮೂಲದ ಪ್ರಖರ ಹಿಂದುತ್ವವಾದಿ ಕಾಜೋಲ್ ಹಿಂದುಸ್ತಾನಿಯವರು ಹಿಂದುಗಳ ಮಠ ಮಂದಿರ ರೈಲ್ವೆ ನಿಲ್ದಾಣ ಬಸ್ಸು ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳವನ್ನು ಅಕ್ರಮಿಸಿ ಮಸೀದಿ ನಿರ್ಮಿಸಿ ಸಮಾನ್ಯ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಜಿಹಾದಿಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು.

ನಮ್ಮ ಮನೆಯ ತಾಯಂದಿರು ಹೆಣ್ಣು ಮಕ್ಕಳು  ಟಿವಿ ಸೀರಿಯಲ್ ಮೂಲಕ ಹಾಗೂ ಬಾಲಿವುಡ್ ಸಿನಿಮಾ ಮೂಲಕ ಹಿಂದು ತಾಯಂದಿರ ದಿಕ್ಕು ತಪ್ಪಿಸಿದ್ದು ಇದರಿಂದ ನಮ್ಮ ಮನೆಯ ಹೆಣ್ಣು ಮಕ್ಕಳು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದು ಬಾಲಿವುಡ್ ಸಿನಿಮಾಗಳನ್ನು ಹಿಂದುಗಳು ವಿರೋದಿಸಬೇಕೆಂದು ಎಚ್ಚರಿಸಿದರು.

ಸಬಾದ್ಯಕ್ಷರಾಗಿ  ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ಕಾರ್ಯದ್ಯಕ್ಷರಾರ ಅಣ್ಣಯ್ಯ ಕುಲಾಲ್ ರವರು ಅದ್ಯಕ್ಷತೆಯನ್ನೂ ವಹಿಸಿದ್ದರು.

ಸಬಾಕಾರ್ಯಕ್ರಮದಲ್ಲಿ ಮಹೇಶ್ ಶೆಟ್ಟಿ ಕುಡುಪುಲಾಜೆ ˌವಿಶ್ವನಾಥ ಪೂಜಾರಿ ಕಡ್ತಲˌಮತ್ತಿತರ ಸಮಾಜಿಕ ಮುಖಂಡರು ಹಾಗು ರಾಜಕೀಯ ಮುಖಂಡರು ಹಿಂದು  ಮುಖಂಡರು ಬಾಗವಹಿಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!